Advertisement

ಶಿವಾಜಿ ಪುತ್ಥಳಿ ನಿರ್ಮಿಸಲು ಆಗ್ರಹ

06:24 AM Jul 31, 2020 | mahesh |

ಬಾಗಲಕೋಟೆ: ನವನಗರದ ಸೂಕ್ತ ಜಾಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೀರ ಶಿವಾಜಿ ಸೇನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Advertisement

ಸಂಘಟನೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಬುಧವಾರ ಜವಳಿ ಸಚಿವ ಶ್ರೀಮಂತ ಪಾಟೀಲ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇವೆ. ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಹಿಂದೂಗಳ ಹೃದಯ ಸಾಮ್ರಾಟ್‌ ಶಿವಾಜಿ ಪುತ್ಥಳಿ
ಇಲ್ಲ. ಶಿವಾಜಿ ಮಹಾರಾಜರು, ಒಂದು ರಾಜ್ಯಕ್ಕೆ ರಾಜನಾಗಿರದೇ ಇಡೀ ದೇಶಕ್ಕಾಗಿ ಸೈನ್ಯದೊಂದಿಗೆ ಹೋರಾಡಿದ ಮಹಾನ್‌ ಪರಾಕ್ರಮಿ ರಾಜ. ಆದ್ದರಿಂದ ಅವರ
ಪುತ್ಥಳಿಯು, ಬಾಗಲಕೋಟೆಯಲ್ಲಿ ನಿರ್ಮಾಣ ಮಾಡಬೇಕು. ಬಾಗಲಕೋಟೆ ನಗರ, ನವನಗರದ ಯಾವುದೇ ಸೂಕ್ತ ಜಾಗೆಯಲ್ಲಿ ಸರ್ಕಾರದಿಂದ ಶಿವಾಜಿ ಪುತ್ಥಳಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ವೀರ ಶಿವಾಜಿ ಸೇನೆಯ ಜಿಲ್ಲಾ ಅಧ್ಯಕ್ಷ ರಾಯಬಾ ಜಾಧವ, ಪ್ರಧಾನ ಕಾರ್ಯದರ್ಶಿ ಮಾರುತಿ ನಲವಡೆ, ಪ್ರಮುಖರಾದ ಸುಭಾಸ ಕೋಟಿ, ಸಂದೀಪ ಜಾಧವ, ಅಮೀತ್‌ ಲೊಂಡೆ, ರಾಹುಲ ಸೇಟವಾಜಿ, ವಿನಾಯಕ ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next