Advertisement

ಟೈಟಲ್ ವಿವಾದದಲ್ಲಿ “ಸ್ವಾತಿ ಮುತ್ತಿನ ಮಳೆ ಹನಿಯೇ..”

11:44 AM Dec 13, 2022 | Team Udayavani |

ನಟಿ ರಮ್ಯಾ ತಮ್ಮ ಆ್ಯಪಲ್‌ ಬಾಕ್ಸ್‌ ಬ್ಯಾನರ್‌ನಡಿ “ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಚಾರವನ್ನು ಕೇಳಿರಬಹುದು. ರಾಜ್‌ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಕೂಡಾ ಪೂರ್ಣಗೊಳಿಸಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಟೈಟಲ್‌ ಸಮಸ್ಯೆ ಎದುರಾಗಿದೆ.

Advertisement

“ಸ್ವಾತಿ ಮುತ್ತಿನ ಮಳೆ ಹನಿಯೇ…’ ಟೈಟಲ್‌ ಬಳಸಬಾರದೆಂದು ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ತಮ್ಮ ವಕೀಲರ ಮೂಲಕ ಮಂಡಳಿಗೆ ಪತ್ರ ರವಾನಿಸಿದ್ದಾರೆ.

ವಕೀಲರು ನೀಡಿರುವ ಪತ್ರದಲ್ಲಿ “ರಾಜೇಂದ್ರ ಸಿಂಗ್‌ ಬಾಬು ಅವರು ಅಂಬರೀಶ್‌ ಹಾಗೂ ಸುಹಾಸಿನಿ ಜೋಡಿಯಾಗಿ “ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್‌ನಡಿ ಸಿನಿಮಾ ನಿರ್ಮಿಸುತ್ತಿದ್ದು, ಶೇ 80ರಷ್ಟು ಚಿತ್ರೀಕರಣ ಕೂಡಾ ಆಗಿದೆ. ಆದರೆ, ಅಂಬರೀಶ್‌ ಅವರು ನಿಧನರಾದ ಕಾರಣ ಸಿನಿಮಾ ನಿಂತಿದೆ. ಜೊತೆಗೆ ಈ ಟೈಟಲ್‌ ಸಿಂಗ್‌ ಬಾಬು ಅವರು ನಿರ್ದೇಶಿಸಿರುವ “ಬಣ್ಣದ ಗೆಜ್ಜೆ’ ಚಿತ್ರದ ಹಾಡಿನದ್ದಾಗಿದ್ದು, ಈ ಟೈಟಲ್‌ ಅನ್ನು ಅವರೇ ನೋಂದಾವಣೆ ಮಾಡಿರುವುದರಿಂದ ಬೇರೆಯವರು ಬಳಸುವಂತಿಲ್ಲ. ಹಾಗಾಗಿ, ಈ ಟೈಟಲ್‌ ಅನ್ನು ಬೇರೆ ಯಾರಿಗೂ ನೀಡಬಾರದು’ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next