Advertisement

ಪುನೀತ್‌ ಬ್ಯಾನರ್‌ನ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ 

11:58 AM Jun 14, 2017 | Team Udayavani |

ಪುನೀತ್‌ ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ಹೊಂಬಾಳೆ ಫಿಲಂಸ್‌ ಜತೆ ಸೇರಿ ಚಿತ್ರವೊಂದನ್ನು ನಿರ್ಮಿಸಲಿದ್ದಾರೆ, ಆ ಚಿತ್ರವನ್ನು “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ನಿರ್ದೇಶಿಸಿದ್ದ ಹೇಮಂತ್‌ ರಾವ್‌ ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆಗ ಆ ಚಿತ್ರಕ್ಕೆ “ಅರ್ಧಸತ್ಯ’ ಎಂದು ನಾಮಕರಣ ಮಾಡಲಾಗಿದೆ ಅಂತಾನೂ ತಿಳಿಸಲಾಗಿತ್ತು. ಆ ಬಳಿಕ “ಅರ್ಧ ಸತ್ಯ’ ಶೀರ್ಷಿಕೆಯಡಿ ಸಿನಿಮಾವೊಂದು ತಯಾರಾಗಿದೆ ಅಂತ ನಿರ್ದೇಶಕ ರಾಮಮೂರ್ತಿ ತಕರಾರು ಎತ್ತಿದ್ದರು.

Advertisement

ತಕರಾರು ವ್ಯಕ್ತವಾದ ಹಿನ್ನೆಲೆಯಲ್ಲಿ ಹೇಮಂತ್‌ ರಾವ್‌ ಶೀರ್ಷಿಕೆ ಬದಲಿಸುವ ಬಗ್ಗೆಯೂ ಹೇಳಿಕೊಂಡಿದ್ದರು. ಇದೆಲ್ಲಾ ಹಳೇ ಕಥೆ. ಈಗ ಹೊಸ ಸುದ್ದಿ ಏನೆಂದರೆ, ಹೇಮಂತ್‌ರಾವ್‌  ನಿರ್ದೇಶನದ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದೆ. ಈ ಹಿಂದೆ ಹಲವು ಬಾರಿ ಶೀರ್ಷಿಕೆ ಬದಲಾದ ಕುರಿತು ಕೇಳುತ್ತಿದ್ದರೂ, ಹೇಮಂತ್‌ ರಾವ್‌ ಚಿತ್ರದ ಟೈಟಲ್‌ ಗುಟ್ಟು ರಟ್ಟು ಮಾಡಿರಲಿಲ್ಲ. ಶೀರ್ಷಿಕೆ ರಿವೀಲ್‌ ಮಾಡೋಕೆ ಒಂದು ಹೊಸ ಪ್ಲಾನ್‌ ಮಾಡುತ್ತಿದ್ದು, ಆ ಬಳಿಕವೇ ಟೈಟಲ್‌ ಅನೌನ್ಸ್‌ ಮಾಡುವುದಾಗಿ ಹೇಳುತ್ತ ಬಂದಿದ್ದರು.

ಆದರೆ, ಈಗ ಅವರ ಚಿತ್ರದ ಶೀರ್ಷಿಕೆ ಏನೆಂಬುದು ಗೊತ್ತಾಗಿದೆ. ಆ ಚಿತ್ರಕ್ಕೆ “ಕವಲು ದಾರಿ’ ಎಂದು ನಾಮಕರಣ ಮಾಡಿರುವುದು ಪಕ್ಕಾ ಆಗಿದೆ. “ಕವಲು ದಾರಿ’ ಶೀರ್ಷಿಕೆಯಡಿ ಹೇಮಂತ್‌ರಾವ್‌ ಏನು ಹೇಳಲು ಹೊರಟಿದ್ದಾರೆ ಅನ್ನೋದು ಇನ್ನೂ ಸಸ್ಪೆನ್ಸ್‌. ಈ ಚಿತ್ರದಲ್ಲಿ “ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ಮನೀಶ್‌ ರಿಷಿ ನಟಿಸುತ್ತಿರುವ ಸುದ್ದಿ ಇದೆ. ಅದರ ಜೊತೆಗೆ ಒಂದಷ್ಟು ಹೊಸ ಮುಖಗಳನ್ನು ಪರಿಚಯಿಸುವ ಹುಮ್ಮಸ್ಸಿನಲ್ಲಿದ್ದಾರೆ ನಿರ್ದೇಶಕರು. ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. ಅದ್ವೆ„ತ ಗುರುಮೂರ್ತಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next