Advertisement

ನವದಂಪತಿ ಮನೆಗೇ ಬರುತ್ತೆ  ತಿರುಪತಿ ಪ್ರಸಾದ

03:45 AM Feb 08, 2017 | |

ತಿರುಪತಿ: ಹೊಸದಾಗಿ ಮದುವೆಯಾಗುವ ಜೋಡಿಗೆ ಅಥವಾ ಕುಟುಂಬ ಸದಸ್ಯರಿಗೆ ಖುಷಿಯ ಸುದ್ದಿ. ತಿರುಪತಿ ತಿಮ್ಮಪ್ಪನ ಅನುಗ್ರಹ, ಆಶೀರ್ವಾದಕ್ಕಾಗಿ ಬಸ್‌, ರೈಲು ಬುಕ್‌ ಮಾಡಿ ತಿರುಮಲಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಮದುವೆ ಕರೆಯೋಲೆಯನ್ನು ಟಿಟಿಡಿ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಟ್ಟರೆ ಸಾಕು.  ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ ಮಾಡಿದ ಪೂಜೆಯ ಅರಸಿನ, ಕುಂಕುಮ ಮತ್ತು ಮಂತ್ರಾಕ್ಷತೆಯನ್ನು ಮನೆಗೇ ಕಳುಹಿಸಿಕೊಡಲಾಗುತ್ತದೆ. ಇದು ಉಚಿತ ಯೋಜನೆಯಾಗಿದೆ. ಮದುವೆಯ ಆಮಂತ್ರಣವನ್ನು ಎಕ್ಸಿಕ್ಯೂಟಿವ್‌ ಆಫೀಸರ್‌, ಟಿಟಿಡಿ, ಕೆ.ಟಿ.ರೋಡ್‌, ತಿರುಪತಿ-517501 ವಿಳಾಸಕ್ಕೆ ಮದುವೆ ದಿನಾಂಕಕ್ಕಿಂತ ಮುಂಚಿತವಾಗಿ ಕಳುಹಿಸಿಕೊಡಬೇಕು. ಶುಭ ದಿನದಂದೇ ತಿರುಪತಿಯಿಂದ ಆಶೀರ್ವಾದ ಬರುತ್ತದೆ. ಇದು ನವ ಜೋಡಿಗಾಗಿಯೇ ಮಾಡಿರುವ ಯೋಜನೆ  ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ. ರವಿ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next