Advertisement

ತಿರುಪತಿ:ಒಂದೇ ದಿನ 7.6 ಕೋಟಿ ರೂ. ಕಾಣಿಕೆ

07:00 PM Jan 04, 2023 | Team Udayavani |

ತಿರುಪತಿ: ವೈಕುಠ ಏಕಾದಶಿ ದಿನ (ಜ.2) ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಹುಂಡಿಗೆ 7.6 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.  ದೇಗುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕದಿನದಲ್ಲಿ ದಾಖಲಾದ ಅತಿಹೆಚ್ಚು ಮೊತ್ತದ ಕಾಣಿಕೆ ಇದಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement

2022ರ ಅಕ್ಟೋಬರ್‌ 23ರಂದು 6.3 ಕೋಟಿ ರೂ. ಮೊತ್ತದ ಕಾಣಿಕೆ ಸಂಗ್ರಹವಾಗಿತ್ತು ಎಂದು ಟಿಟಿಡಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ದೇಗುಲಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಹುಂಡಿಗೆ ಸಲ್ಲಿಕೆಯಾಗುತ್ತಿರುವ ಕಾಣಿಕೆ ಕೂಡ 2012 ರಿಂದ 2022ರ  ಅವಧಿಯಲ್ಲಿ  ದ್ವಿಗುಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next