Advertisement

ಪಾಕ್‌ ಒಳಗೇ ದಾಳಿ ಮಾಡುವ ಕಾಲ ಈಗ ಒದಗಿದೆ: ಉದ್ಧವ್‌ ಠಾಕ್ರೆ

01:54 PM Feb 15, 2019 | udayavani editorial |

ಮುಂಬಯಿ : ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ  ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಸಂಘಟನೆಯಿಂದ ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲೀಗ ಪಾಕಿಸ್ಥಾನದ ಒಳಗೆ ನುಗ್ಗಿ ದಾಳಿ ನಡೆಸುವ ಕಾಲ ಒದಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ. 

Advertisement

ಒಂದು ವೇಳೆ ಸಿಆರ್‌ಪಿಎಫ್ ಯೋಧರ ಮೇಲಿನ ಉಗ್ರ ದಾಳಿಯು ಗುಪ್ತಚರ ವೈಫ‌ಲ್ಯದಿಂದ ಆಗಿದ್ದಲ್ಲಿ ಅದರ ಹೊಣೆಗಾರಿಕೆ ಇದ್ದವರನ್ನು ಕಿತ್ತು ಹಾಕಬೇಕು ಎಂದು ಠಾಕ್ರೆ ಹೇಳಿದರು. 

2016ರ ಸರ್ಜಿಕಲ್‌ ದಾಳಿಯ ಬಳಿಕ ಈಗ ಪಾಕಿಸ್ಥಾನದ ಒಳಗೇ ದಾಳಿ ನಡೆಸುವ ಕಾಲ ಒದಗಿ ಬಂದಿದೆ ಎಂದು ಠಾಕ್ರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next