Advertisement

ಎಸ್ಟೇಟ್‌ನಲ್ಲಿ ಹುಲಿ ಪ್ರತ್ಯಕ್ಷ: ಆತಂಕ

12:40 PM Aug 20, 2018 | Team Udayavani |

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಲಯದ ಪಕ್ಕದಲ್ಲಿನ ತರಗನ್‌ ಎಸ್ಟೇಟ್‌ನಲ್ಲಿ ಕಳೆದೊಂದು ವಾರದಿಂದ ಹುಲಿ ಕಾಣಿಸಿಕೊಂಡಿರುವುದಲ್ಲದೆ, ಈಗಾಗಲೆ ಎರಡು ಜಾನುವಾರುಗಳನ್ನು ತಿಂದು ಹಾಕಿದ್ದು, ಮತ್ತೆರಡು ಜಾನುವಾರುಗಳನ್ನು ಗಾಯಗೊಳಿಸಿ ಆತಂಕ ಮೂಡಿಸಿತ್ತು.

Advertisement

ಅಲ್ಲದೆ ಹಸುವೊಂದರ ಮೇಲೆ ದಾಳಿ ಮಾಡುತ್ತಿದ್ದ ಹುಲಿಯನ್ನು ಕಂಡಿರುವ ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್‌.ರವಿಶಂಕರ್‌ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮತ್ತಿಗೋಡು ವಲಯದ ಕಂಠಾಪುರ ಶಿಬಿರದ ಸಾಕಾನೆಗಳಾದ ಅಭಿಮನ್ಯು, ಬಲರಾಮ, ಭೀಮ, ಗಣೇಶ, ದ್ರೋಣ ಆನೆಗಳ ಸಹಾಯದಿಂದ ಪ್ರತ್ಯೇಕ ತಂಡ ರಚಿಸಿಕೊಂಡು 400 ಎಕರೆಗೂ ಹೆಚ್ಚು ಪ್ರದೇಶದ ತರಗನ್‌ ಎಸ್ಟೇಟ್‌ನಲ್ಲಿ ಹುಲಿ ಪತ್ತೆಗೆ ಕೂಂಬಿಂಗ್‌ ನಡೆಯುತ್ತಿದೆ.

ಹುಲಿಯಿಂದಾಗಿ ಕಚುವಿನಹಳ್ಳಿ, ನೇರಳೇಗುಪ್ಪೆ, ಕೆ.ಜಿ. ಹಬ್ಬನಕುಪ್ಪೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆ ಆತಂಕಗೊಂಡಿದ್ದಾರೆ. ಸ್ಥಳದಲ್ಲಿ ಸಿ.ಎಫ್‌.ರವಿಶಂಕರ್‌, ವೈಲ್ಡ್‌ ಲೈಫ್‌ ವಾರ್ಡನ್‌ ಕೃತಿಕ ಸೇರಿದಂತೆ ತಂಡ ಕಾರ್ಯಾಚರಣೆಗೆ ಮುಂದಾಗಿದೆ. ಕೆ.ಜಿ.ಹಬ್ಬನಕುಪ್ಪೆ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿರುವ ಹುಲಿಯು ಎಸ್ಟೇಟ್‌ನ ಸುತ್ತಮುತ್ತ ಅಡ್ಡಾಡುತ್ತಿರುವ ಮಾಹಿತಿ ಸಿಕ್ಕಿದೆ.

ಅಗತ್ಯ ವಿರುವೆಡೆ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ. ಈಗಾಗಲೆ ಹುಲಿಯನ್ನು ಉದ್ಯಾನದೊಳಗೆ ಸೇರಿಸಲು ಪ್ರಯತ್ನ ನಡೆದಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಬಗ್ಗೆ ಹಿರಿಯ ಅ ಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದೆಂದು ನಾಗರಹೊಳೆ ಉದ್ಯಾನವನದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್‌.ರವಿಶಂಕರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next