Advertisement

ನೆರಳಿಗಾಗಿ ಮರದಡಿ ಕುಳಿತವರಿಗೆ ಸಿಡಿಲು ಬಡಿತ: ತಾಯಿ-ಮಗಳು ಸಾವು

04:13 PM Oct 10, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಮದ್ಯಾಹ್ನ ಮಳೆ ಇಲ್ಲದೇ ಸಿಡಿಲು ಬಡಿದು ತಾಯಿ ಹಾಗೂ ಮಗಳು ಮೃತಪಟ್ಟು, ಇನ್ನೊಬ್ಬನಿಗೆ ಗಾಯಗಳಾದ ಘಟನೆ ಜರುಗಿದೆ.

Advertisement

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ಹೊರ ಭಾಗದಲ್ಲಿ ಬಿದ್ದ ಸಿಡಿಲಿಗೆ ಸಾವನ್ನಪ್ಪಿದವರನ್ನು ಮಹಾದೇವಿ ಭಜಂತ್ರಿ (43), ಆಕೆಯ ಮಗಳು ಸೋನಿ ಭಜಂತ್ರಿ (12) ಎಂದು ಗುರುತಿಸಲಾಗಿದೆ. ಮೃತ ಮಹಾದೇವಿಯವರ ಪತಿ ಯಂಕಪ್ಪನಿಗೆ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪತಿ, ಪತ್ನಿ ಹಾಗೂ ಮಗಳು ಜಮೀನಿನಿಂದ ವಾಪಸ್ ಮನೆಗೆ ಬರುವ ವೇಳೆ ಮರದ ನೆರಳಿಗೆ ಕುಳಿತಿದ್ದರು. ಈ ವೇಳೆ ಸಿಡಿಲು ಬಡಿದು, ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಮಹದಾಯಿ- ಕೃಷ್ಣಾ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ

ಸುದ್ದಿ ತಿಳಿಯುತ್ತಲೇ ಬಸವನಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next