Advertisement

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

07:53 PM Oct 23, 2021 | Team Udayavani |

ಮುಂಡರಗಿ: ತಾಲೂಕಿನ ದೋಣಿ ತಾಂಡಾದಲ್ಲಿ ಹೊಲದಲ್ಲಿ ಮೇಯಿತ್ತಿದ್ದ ಕುರಿಗಳಿಗೆ ಸಿಡಿಲು ಬಡಿದು 11 ಕುರಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

Advertisement

ಇಂದು ಸಾಯಂಕಾಲ 4 ಘಂಟೆಯ ಸುಮಾರಿಗೆ ಡೋಣಿತಾಂಡಾದ ಚನ್ನಪ್ಪ ಸೋಮಪ್ಪ ಲಮಾಣಿ ಇವರ ಜಮೀನಿನಲ್ಲಿ ಮೇಯುತ್ತಿದ್ದ ಶಂಕ್ರಪ್ಪ ಸಕ್ರಪ್ಪ ಲಮಾಣಿ ಇವರಿಗೆ ಸೇರಿದ 6 ಕುರಿಗಳು ಹಾಗು ಶೇಖಪ್ಪ ಲಮಾಣಿ ಇವರಿಗೆ ಸೇರಿದ 2 ಕುರಿಗಳು ಮತ್ತು ಪೂರಪ್ಪ ಲಮಾಣಿ ಇವರಿಗೆ ಸೇರಿದ 3ಕುರಿಗಳು ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ತಹಶೀಲ್ದಾರ್ ಆಶಪ್ಪ ಪೂಜಾರ ಹಾಗು ಕಂದಾಯ ನಿರೀಕ್ಷಕ ಡಂಬಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುರಿಗಳನ್ನೇ ನಂಬಿಕೊಂಡಿದ್ದ ಮಾಲೀಕರು ಕುರಿಗಳ ಸಾವಿನಿಂದ ಕಂಗೆಟ್ಟಿದ್ದು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ :ಕ್ರೀಡಾಪಟುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಲು ನಿರ್ಧಾರ: ಸಚಿವ ನಾರಾಯಣ ಗೌಡ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next