Advertisement

ಕೆದಿಲದಲ್ಲಿ ಕಾಡಾನೆ ಹಾವಳಿ: ಕೃಷಿ ನಾಶ

06:35 AM Mar 10, 2018 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಆಸುಪಾಸಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ.

Advertisement

ಗುರುವಾರ ತಡರಾತ್ರಿ ಐನಕಿದು ಗ್ರಾಮದ ಕೆದಿಲ ನಿವಾಸಿ  ಶಶಿಧರ ಅವರ ತೋಟಕ್ಕೆ  ನುಗ್ಗಿ ಫ‌ಸಲಿರುವ ಬ್ರಹತ್‌ ಗಾತ್ರದ ಎರಡು ತೆಂಗಿನ ಸಸಿ, ನೂರೈವತ್ತಕ್ಕೂ  ಹೆಚ್ಚಿನ  ಬಾಳೆ ಹಾಗೂ ಅಡಿಕೆ ಗಿಡಗಳನ್ನು ನಾಶಪಡಿಸಿದೆ. ಪಕ್ಕದ ಕೆದಿಲ ದೇವರಾಜ್‌ ಅವರ ತೋಟಕ್ಕೂ  ದಾಂಧಲೆ ನಡೆಸಿದ್ದು, ತೆಂಗು, ಕಂಗು ಹಾಗೂ  ಬಾಳೆಗಿಡ ಗಳನ್ನು ನಾಶಪಡಿಸಿದೆ. ಕೃಷಿ ಯಂತ್ರೋ ಪಕರಣಗಳಿಗೂ ಹಾನಿ ಮಾಡಿದೆ.

ಹೆಚ್ಚಿನ ದಿನಗಳಲ್ಲಿ ಕೆದಿಲ ಬಳಿ ಆನೆಗಳು ಓಡಾಟ ನಡೆಸುತ್ತಿರುತ್ತವೆ. ಈ ಮಾರ್ಗದಲ್ಲಿ ಸಂಜೆ ಏಳು ಗಂಟೆ ಹೊತ್ತಿಗೆ ತೆರಳಿದರೆ ರಸ್ತೆಯಲ್ಲಿ ಆನೆಗಳು ಎದುರಾಗುತ್ತವೆ. 
 
ರಸ್ತೆಯಲ್ಲಿ 3 ಕಿ.ಮೀ. ಸಂಚಾರ!
ಮೂರು ದಿನಗಳ ಹಿಂದೆಯಷ್ಟೆ ಹರಿಹರ – ಕೊಲ್ಲಮೊಗ್ರು ಮುಖ್ಯ ಮಾರ್ಗದಲ್ಲಿ 3 ಕಿ. ಮೀ. ದೂರ ಆನೆ ನಿರ್ಭೀತಿಯಿಂದ ಓಡಾಡಿತ್ತು. ಹರಿಹರ ಮುಖ್ಯ ಪೇಟೆಯಲ್ಲಿಯೇ ಇದು ಸಂಚಾರ ನಡೆಸಿತ್ತು ಎಂದು ಸ್ಥಳೀಯರು ತಿಳಿಸಿದ್ದು, ಆನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next