Advertisement

Haryana Election: ಹರಿಯಾಣ ಬಿಜೆಪಿ ಗೆಲುವಿಗೆ ಶ್ರಮಿಸಿದ ವಾರ್‌ರೂಂನ “ತ್ರಿಶಕ್ತಿ’ ನಾಯಕರು!

08:54 AM Oct 10, 2024 | Team Udayavani |

ಚಂಡೀಗಢ: ಹರಿಯಾಣ ಚುನಾವಣೆಯಲ್ಲಿ ಬಿಜೆ ಪಿಯ ಅಭೂತಪೂರ್ವ ಗೆಲುವು ಇಡೀ ದೇಶದ ಚಿತ್ತ ಸೆಳವ ಜತೆಗೆ ಅಚ್ಚರಿಯನ್ನೂ ಸೃಷ್ಟಿಸಿದೆ. ಕಾರಣ ರಾಜ್ಯ ದಲ್ಲಿ ಬಿಜೆಪಿ ಬರೀ ಕಾಂಗ್ರೆಸ್‌ ಅನ್ನು ಮಣಿಸಿದ್ದು ಮಾತ್ರ ವಲ್ಲ, 10 ವರ್ಷಗಳ ಆಡಳಿತದ ಬಳಿಕ ಸೃಷ್ಟಿಯಾಗಿದ್ದ ಆಡಳಿತ ವಿರೋಧಿ ಅಲೆ, ಜಾಟ್‌ ಸಮುದಾಯದ ಕೋಪ, ರೈತರ ಆಕ್ರೋಶವನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ಬಿಜೆಪಿಯ ಈ ಐತಿಹಾಸಿಕ ಗೆಲುವಿನ ಹಿಂದಿರುವ ಸೂತ್ರಧಾರಿಗಳು ಮೂವರು!

Advertisement

ಹೌದು, ಬಿಜೆಪಿ ತೆಕ್ಕೆಗೆ ಹರಿಯಾಣ ಜಾರಿದ್ದರ ಹಿಂದೆ ಬಿಜೆಪಿ ನಾಯಕರಾದ ಧಮೇಂದ್ರ ಪ್ರಧಾನ್‌, ಸತೀಶ್‌ ಪೂನಿಯಾ, ಬಿಪ್ಲಬ್‌ ದೇಬ್‌ ಎಂಬ ಮೂವರು ಕಟ್ಟಾಳುಗಳ ಶ್ರಮವಿದೆ. ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯ ಕ್ಷರ ಸಾಲಿನಲ್ಲಿ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರಾ ಗಿರುವ ಪ್ರಧಾನ್‌, ಒಡಿಶಾದಲ್ಲಿ ಕಮಲ ಅರಳಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಹರಿಯಾಣ ದಲ್ಲೂ ಸಂಘಟನಾಚತುರನಾಗಿ ಕಾರ್ಯನಿರ್ವಹಿಸಿ, ನೆಟ್‌ ಮತ್ತು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ಜ್ವಲಂತ ಸಮಸ್ಯೆಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾದ ಪೂನಿಯಾ ಜಾಟ್‌ ಸಮುದಾಯದ ಮನವೊಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರೆ, ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್‌ ದೇಬ್‌ ಹರಿಯಾಣ ಚುನಾವಣೆಗಾಗಿ ಕೆಲಸ ಮಾಡಿ, ಜಾಟರು, ದಲಿತರು, ವಾಲ್ಮೀಕಿ, ಬಿಷ್ಣೋಯ್‌, ಸಿಕ್ಖ್ ಸಮುದಾಯಗಳಿಗೆ ಬಿಜೆಪಿಯ ಯೋಜನೆಗಳನ್ನು ತಲುಪಿಸಿ ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರು ಪರಿಶ್ರಮವು ಹರಿಯಾಣ ಗೆಲುವಿನ ಮೂಲಕ ಉತ್ತಮ ಪ್ರತಿಫ‌ಲ ಕಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next