Advertisement

ಚಾಮರಾಜನಗರ: ಬಿಳಿಕಲ್ಲು ಕ್ವಾರಿ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವು

02:54 PM Dec 26, 2022 | Team Udayavani |

ಚಾಮರಾಜನಗರ: ಬಿಳಿಕಲ್ಲು ಕ್ವಾರಿ ಕುಸಿದು ಮೂರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ  ಚಾಮರಾಜನಗರ ತಾಲೂಕಿನ ಬಿಸಲವಾಡಿಯಲ್ಲಿ ಸೋಮವಾರ ಘಟನೆ ನಡೆದಿದೆ.

Advertisement

ಕುಮಾರ್, ಶಿವರಾಜು, ಸಿದ್ದರಾಜು ಮೃತ ಕಾರ್ಮಿಕರು ಎಂದು ತಿಳಿದು ಬಂದಿದೆ. ಮೂವರೂ ತಾಲೂಕಿನ ಕಾಗಲವಾಡಿ‌ ಮೋಳೆ ಗ್ರಾಮದವರ ಎಂದು ತಿಳಿದು ಬಂದಿದೆ.

ಕ್ವಾರೆಗೆ ಕುಳಿ ಒಡೆಯಬೇಕಾದರೆ ಘಟನೆ. ಮೇಲಿನಿಂದ ಬಂಡೆ ಬಿದ್ದು ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

ಇದೇ ವರ್ಷದ  ಮಾರ್ಚ್ 4 ರಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಇಂತಹದೇ ದುರಂತ ನಡೆದಿತ್ತು. ಅಂದು ಉತ್ತರ ಪ್ರದೇಶದ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next