Advertisement

ಹಿಮ ಬಂಡೆ ಕುಸಿತಕ್ಕೆ ಸಿಲುಕಿ ಮೂವರು ಯೋಧರು ನಾಪತ್ತೆ

12:11 PM Dec 12, 2017 | udayavani editorial |

ಶ್ರೀನಗರ : ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್‌ ವಲಯದಲ್ಲಿನ ಮುಂಚೂಣಿ ಸೇನಾ ಹೊರ ಠಾಣೆ ತೀವ್ರ ಹಿಮಪಾತ ಮತ್ತು ಹಿಮ ಬಂಡೆ ಕುಸಿತಕ್ಕೆ ಗುರಿಯಾದ ಕಾರಣ ಮೂವರು ಭಾರತೀಯ ಯೋಧರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

Advertisement

ಸೋಮವಾರ ಮತ್ತು ಮಂಗಳವಾರ ನಡುವಿನ ರಾತ್ರಿಯ ವೇಳೆ ನಿಯಂತ್ರಣ ರೇಖೆ ಸಮೀಪದ ಗುರೇಜ್‌ ವಲಯದಲ್ಲಿನ ಬಕ್‌ತೂರ್‌ ಸೇನಾ ಹೊರ ಠಾಣೆಯು ಹಿಮ ಪಾತ ಮತ್ತು ಹಿಮ ಬಂಡೆ ಕುಸಿತದ ದುರಂತಕ್ಕೆ ಗುರಿಯಾಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಹಿಮ ಬಂಡೆ ಕುಸಿತವನ್ನು ಅನುಸರಿಸಿ ಮೂವರು ಭಾರತೀಯ ಯೋಧರು ನಾಪತ್ತೆಯಾಗಿರುವುದಾಗಿ ಅವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next