Advertisement

ಮೂವರು ಕೊಲೆ ಆರೋಪಿಗಳ ಬಂಧನ

12:44 AM Apr 11, 2019 | Team Udayavani |

ಬೆಂಗಳೂರು: ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಮೂವರು ಅರೋಪಿಗಳನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಕೆ.ಜಿ.ಹಳ್ಳಿಯ ಲೋಕೇಶ್‌ ಅಲಿಯಾಸ್‌ ಪುಟಾಣಿ (21), ದೊಡ್ಡಗುಂಟೆಯ ಸೆಲ್ವರಾಜ್‌ ಅಲಿಯಾಸ್‌ ಸೆಲ್ವ(19) ಮತ್ತು ಕಾಕ್ಸ್‌ಟೌನ್‌ನ ಸುನಿಲ್‌(20) ಬಂಧಿತರು.

ಆರೋಪಿಗಳು ಮಾ.24ರಂದು ರಾತ್ರಿ ಬಾಣಸವಾಡಿ ಮುಖ್ಯ ರಸ್ತೆಯ ಉಡುಪಾಸ್‌ ಹೋಟೆಲ್‌ ಮುಂಭಾಗ ಮದ್ಯದ ಬಾಟಲಿ ಕೊಂಡೊಯ್ಯುತ್ತಿದ್ದ ಸತ್ಯಶೀಲನ್‌ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದರು.

ಕಲ್ಲಳ್ಳಿ ಹಿಂದೂ ರುದ್ರಭೂಮಿ ಸಮೀಪ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮಾ.24ರಂದು ರಾತ್ರಿ 10.30ರ ಸುಮಾರಿಗೆ ಸತ್ಯಶೀಲನ್‌ ಬಾಣಸವಾಡಿ ಮುಖ್ಯ ರಸ್ತೆಯ ಉಡುಪಾಸ್‌ ಹೋಟೆಲ್‌ ಮುಂಭಾಗ ಮದ್ಯ ಬಾಟಲಿಯನ್ನು ಕೊಂಡೊಯ್ಯುತ್ತಿದ್ದರು.

ಇದೇ ವೇಳೆ ಎರಡು ಬೈಕ್‌ಗಳಲ್ಲಿ ಬರುತ್ತಿದ್ದ ಆರೋಪಿಗಳು, ಸತ್ಯಶೀಲನ್‌ನನ್ನು ಅಡ್ಡಗಟ್ಟಿ ಮದ್ಯದ ಬಾಟಲಿ ಕೊಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಸತ್ಯಶೀಲನ್‌ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಆತನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next