Advertisement

ಇನ್ನು ಮೂರು ದಿನ “ಮೌನ’

11:42 PM Jul 12, 2019 | Lakshmi GovindaRaj |

ಶುಕ್ರವಾರದ ಅಧಿವೇಶನ ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿ ಮೊದಲ ದಿನದ ಕಲಾಪ ಸುಸೂತ್ರವಾಗಿದ್ದು ಇನ್ನು ಮೂರು ದಿನ “ಮೌನ’ದ ವಾತಾವರಣ ಎಂಬಂತಾಗಿದೆ. ಶನಿವಾರ ಹಾಗೂ ಭಾನುವಾರ ಕಲಾಪಕ್ಕೆ ರಜೆ. ಸೋಮವಾರ ಕಲಾಪ ಮತ್ತೆ ಆರಂಭವಾಗಲಿದೆ.

Advertisement

ಅತ್ತ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತು ತೀರ್ಪು ಹೊರಬೀಳಲಿದೆ. ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ಹೋರಾಟ ಎಂದು ಬಿಜೆಪಿ ಹೇಳಿರುವುದರಿಂದ ಬುಧವಾರ ವಿಶ್ವಾಸಮತ ಯಾಚನೆಗೆ ನಾನು ಸಿದ್ಧ ಎಂದು ಮುಖ್ಯಮಂತ್ರಿಯವರು ಹೇಳಿರುವುದರಿಂದ ಅಲ್ಲಿಯವರೆಗೆ ಕಾದು ನೋಡಬೇಕಾಗಿದೆ.

ಈ ಮಧ್ಯೆ, ಅತೃಪ್ತ ಶಾಸಕರ ಮನವೊಲಿಕೆಯಾಗುತ್ತಾ? ರಾಜೀನಾಮೆ ನೀಡಿರುವ ಶಾಸಕರಲ್ಲಿ ಕೆಲವರು ವಾಪಸ್‌ ಪಡೆಯುತ್ತಾರಾ? ಬಿಜೆಪಿ ಶಾಸಕರು ಕಾಂಗ್ರೆಸ್‌-ಜೆಡಿಎಸ್‌ ಗಾಳಕ್ಕೆ ಬೀಳ್ತಾರಾ ಎಂಬ ಪ್ರಶ್ನೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next