Advertisement

ಭಿವಂಡಿಯಲ್ಲಿ ಕಳ್ಳನ ಹತ್ಯೆ; ಮೂವರ ಬಂಧನ

06:58 PM Nov 05, 2020 | mahesh |

ಥಾಣೆ: ರೆಸ್ಟೋರೆಂಟ್‌ಗೆ ನುಗ್ಗಿ ಮೊಬೈಲ್‌ ಫೋನ್‌ಗಳನ್ನು ಕಳವು ಮಾಡಿದ್ದ ವ್ಯಕ್ತಿಯನ್ನು ಹತ್ಯೆಗೈದ ಆರೋಪದ ಮೇಲೆ ಜಿಲ್ಲೆಯ ಭಿವಂಡಿ ಪಟ್ಟಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

Advertisement

ಶಂಶಿದ್ದೀನ್‌ ಆಸಿಫ್‌ ಶೇಖ್‌ ಮತ್ತು ಆತನ ಸಹಚರ ಬುಧವಾರ ಮುಂಜಾನೆ ಬಾಲಾಜಿ ನಗರದ ರೆಸ್ಟೋರೆಂಟ್‌ಗೆ ನುಗ್ಗಿ ಆವರಣದಲ್ಲಿ ಮಲಗಿದ್ದ ಕಾರ್ಮಿಕರ ಮೊಬೈಲ್‌ ಫೋನ್‌ ಕದ್ದಿದ್ದರು. ತುಸು ಶಬ್ದ ಕೇಳಿದ ಅನಂತರ ಎಚ್ಚರಗೊಂಡ ಕಾರ್ಮಿಕರು ಶೇಖ್‌ನನ್ನು ಹಿಡಿದು ತಮ್ಮ ಫೋನ್‌ಗಳನ್ನು ಹಿಂತಿರುಗಿಸುವಂತೆ ಆತನಿಗೆ ಒತ್ತಾಯಿಸಿದರು. ಸಂತ್ರಸ್ತನು ಕದ್ದ ವಸ್ತುಗಳನ್ನು ಹಿಂತಿರುಗಿಸಲು ನಿರಾಕರಿಸಿದ ಕಾರಣ ಆತನ ಮೇಲೆ ಹಲ್ಲೆ ಮಾಡಿದ್ದು, ಸಂತ್ರಸ್ತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸಹಚರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ನಾರ್ಪೋಲಿ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ ಮಾಲೋಜಿ ಶಿಂಧೆ ತಿಳಿಸಿದ್ದಾರೆ.

ಆರೋಪಿಗಳಾದ ಅಶ್ರಫ್‌ ಇದ್ರೀಸ್‌ ಖಾನ್‌ (25), ಸುರೇಶ್‌ ಜೈಕಿಸನ್‌ ವರ್ಮಾ (28) ಮತ್ತು ಅಜಯ್‌ ಅಂಬಿಕಾಪ್ರಸಾದ್‌ ವರ್ಮಾ (30) ಅವರನ್ನು ಬಂಧಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next