Advertisement

ಪ್ರತ್ಯೇಕ ಅಪಘಾತಗಳಲ್ಲಿ ಮೂವರ ಸಾವು

06:40 AM Jan 22, 2019 | |

ಬೆಂಗಳೂರು: ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಸರಕು ಸಾಗಣೆ ವಾಹನಕ್ಕೆ ಬೈಕ್‌ ಡಿಕ್ಕಿಯಾಗಿ ಯುವಕ ಮೃತಪಟ್ಟ ಘಟನೆ ಕೆ.ಆರ್‌.ಪುರದ ಬಟ್ಟರಹಳ್ಳಿ ಬಳಿ ನಡೆದಿದೆ. ಪಶ್ಚಿಮ ಬಂಗಾಳದ ಅತುಲ್‌ ಬರ್ಮನ್‌ ಮೃತನು.

Advertisement

ಗಾರೆ ಕೆಲಸ ಮಾಡುತ್ತಿದ್ದ ತುಲ್‌, ಭಾನುವಾರ ರಾತ್ರಿ 8.30ರ ವೇಳೆಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸಲಿಲ್ಲ. ಪ್ರಕರಣ ದಾಖಲಿಸಿಕೊಂಡ ಕೆ.ಆರ್‌.ಪುರ ಪೊಲೀಸರು, ಸರಕು ಸಾಗಣೆ ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಬೈಕ್‌ ಸವಾರ ಸಾವು: ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ವೈಟ್‌ಫೀಲ್ಡ್‌ ಬಿಗ್‌ಬಜಾರ್‌ ಬಳಿ ನಡೆದಿದೆ. ತಮಿಳುನಾಡಿನ ಪರಮೇಶ್ವರನ್‌ ಮೃತನು. ಖಾಸಗಿ ಗ್ರಾಫಿಕ್‌ ಕಂಪನಿ ಉದ್ಯೋಗಿ ಪರಮೇಶ್ವರನ್‌, ಭಾನುವಾರ ಮಧ್ಯಾಹ್ನ ತನ್ನ ಬುಲೆಟ್‌ ಬೈಕ್‌ನಲ್ಲಿ ಮನೆಗೆ ಹೋಗುವಾಗ ಅವಘಡ ಸಂಭವಿಸಿದ್ದು, ವೈಟ್‌ಫೀಲ್ಡ್‌ನ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಮಿಕನ ಮೇಲೆ ಹರಿದ ಲಾರಿ: ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಸರಕು ಸಾಗಣೆ ಲಾರಿ ಹರಿದು, ಚಿಕಿತ್ಸೆ ಫ‌ಲಿಸದೆ ಕಾರ್ಮಿಕ ಮೃತಪಟ್ಟ ಘಟನೆ ದೇವನಹಳ್ಳಿ ಡಾಬಾ ಗೇಟ್‌ ಬಳಿ ನಡೆದಿದೆ. ಬಿಹಾರ ಮೂಲದ ನಿರಂಜನ್‌ (50) ಮೃತರು. ಡಾಬಾ ಗೇಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕನಾಗಿದ್ದ ನಿರಂಜನ್‌, ಭಾನುವಾರ ರಾತ್ರಿ 8 ಗಂಟೆಗೆ ರಸ್ತೆ ದಾಟುವಾಗ ಘಟನೆ ನಡೆದಿದೆ. ದೇವನಹಳ್ಳಿ ಸಂಚಾರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next