Advertisement

ಕೀಟನಾಶಕ ಸೇವಿಸಿ ಮೂವರ ಸಾವು

11:15 PM Mar 14, 2020 | Lakshmi GovindaRaj |

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕಾಶಾಪುರ ಮತ್ತು ಕಡೇಹಳ್ಳಿ ಹೊರವಲಯದ ರಂಗಪ್ಪದಿನ್ನೆಯ ನಿರ್ಜನ ಪ್ರದೇಶದಲ್ಲಿನ ಚೆಕ್‌ ಡ್ಯಾಂ ಬಳಿ ಶನಿವಾರ ಬೆಳಗ್ಗೆ ಕೀಟನಾಶಕ ಸೇವಿಸಿ ಇಬ್ಬರು ಮಹಿಳೆಯರ ಸಹಿತ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಮೃತರನ್ನು ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡ ಕಿರಗಂಧಿ ಗ್ರಾಮದ ನಿವಾಸಿ ಗಂಗರಾಜಪ್ಪ (35), ಗುಡಿಬಂಡೆ ತಾಲೂಕಿನ ದೂಮಕುಂಟಹಳ್ಳಿ ಗ್ರಾಮದ ಶಿವಮ್ಮ (26) ಹಾಗೂ ಅಂದಾರ‌್ಲಹಳ್ಳಿಯ ಗಾಯಿತ್ರಿ (35) ಎಂದು ಗುರುತಿಸಲಾಗಿದೆ. ಊಟ ಮಾಡಿ ನಂತರ ವಿಷ ಸೇವಿಸಿದ್ದಾರೆ.

ಶಿವಮ್ಮ ಹಾಗೂ ಗಾಯಿತ್ರಿ ಅಕ್ಕ-ತಂಗಿಯರಾಗಿದ್ದು, ಶಿವಮ್ಮನ ಗಂಡ ಆಂದಾರ‌್ಲಹಳ್ಳಿಯಲ್ಲಿ ವಾಸವಾಗಿದ್ದಾನೆ. ಗಾಯಿತ್ರಿಯ ಗಂಡ ಮೃತಪಟ್ಟಿದ್ದಾನೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಅಕ್ಕ-ತಂಗಿಯರ ನಡುವೆ ಜಗಳವಾಗಿ, ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next