Advertisement

ಉತ್ತರಕಾಶಿ;ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಪ್ಟರ್ ಅಪಘಾತ, ಪೈಲಟ್ ಸೇರಿ ಮೂವರು ಸಾವು

09:07 AM Aug 22, 2019 | Team Udayavani |

ಉತ್ತರಾಖಂಡ್:ಭಾರೀ ಮಳೆಗೆ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್ ನ ಉತ್ತರಕಾಶಿಯಲ್ಲಿ ಬುಧವಾರ ನಡೆದಿದೆ.

Advertisement

ಹೆಲಿಕಾಪ್ಟರ್ ಪೈಲಟ್ ಗಳಾದ ರಾಜ್ ಪಾಲ್ ಮತ್ತು ಕಪ್ಟಾಲ್ ಲಾಲ್ ಮತ್ತು ಸ್ಥಳೀಯ ವ್ಯಕ್ತಿ ರಮೇಶ್ ಸಾವಾರ್ ಮೃತಪಟ್ಟಿರುವುದಾಗಿ ಎಎನ್ ಐ ವರದಿ ಮಾಡಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿದ್ದ ಜನರಿಗೆ ಪರಿಹಾರ ವಸ್ತುಗಳನ್ನು ವಿತರಿಸಿ ಹೆಲಿಕಾಪ್ಟರ್ ವಾಪಸ್ ಆಗುತ್ತಿದ್ದ ವೇಳೆ ಮೋಲ್ಡಿ ಸಮೀಪ ಅಪಘಾತಕ್ಕೀಡಾಗಿರುವುದಾಗಿ ಉತ್ತರಕಾಶಿ ವಿಪತ್ತು ನಿರ್ವಹಣಾ ಮಂಡಳಿ ಅಧಿಕಾರಿ ದೇವೇಂದ್ರ ಪಾಟ್ವಾಲ್ ಪಿಟಿಐಗೆ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಹೇಗೆ ಅಪಘಾತಕ್ಕೀಡಾಯ್ತು, ಏನು ಕಾರಣ ಎಂಬ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next