Advertisement

Darshan Fans: ದರ್ಶನ್‌ ಅಭಿಮಾನಿಗಳಿಂದ ಕೊಲೆ ಬೆದರಿಕೆ

01:09 PM Aug 04, 2024 | Team Udayavani |

ಬೆಂಗಳೂರು: ಆರೋಪ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನ ಕ್ಕೊಳಗಾಗಿರುವ ನಟ ದರ್ಶನ್‌ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಡಾ.ರಾಜ್‌ ಕುಮಾರ್‌ ಅಭಿಮಾನಿ ಯೋಗಿ ಎಂಬುವವರು ಪಶ್ಚಿಮ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ದರ್ಶನ್‌ ಅಭಿಮಾನಿಗಳು ಎಂದು ಹೇಳಿಕೊಂಡಿರುವ ರಂಗಾರೆಡ್ಡಿ, ನಾಗ ರಾಜ್‌ ದಚ್ಚು, ವಿಶ್ವಾಸ್‌, ವೀರೇಶ್‌, ಡಿ ಬಾಸ್‌ ಅಭಿಮಾನಿ, ಡಿ ಬಾಸ್‌ ಅಡ್ಡ, ಕಿಂಗ್‌ ಬಸವ ಎಂಬ ಫೇಸ್‌ಬುಕ್‌ ಖಾತೆಗಳಿಂದ ಬೆದರಿಕೆ ಸಂದೇಶ ಬಂದಿದೆ. ಇಷ್ಟಕ್ಕೆ ಸುಮ್ಮನಾಗದೇ ಮೊಬೈಲ್‌ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಫೇಸ್‌ ಬುಕ್‌ನಲ್ಲಿ ನಕಲಿ ಖಾತೆ ತೆರೆದು ಎಚ್ಚರಿಕೆ ಕೊಡುತ್ತಿದ್ದಾರೆ. ಡಿ ಬಾಸ್‌ ಅಭಿಮಾನಿಗಳ ಕೈಗೆ ಸಿಕ್ಕರೆ ನಿನ್ನನ್ನು ಮುಗಿಸಿ ಬಿಡುತ್ತೇವೆ ಎಂದು ಮೆಸೇಜ್‌ ಕಳುಹಿಸಿದ್ದಾರೆ. ಕೊಲೆ ಬೆದರಿಕೆಯ ಜೊತೆಗೆ ಯೋಗಿ ಫೋಟೋ ಬಳಸಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಲಾಗುತ್ತಿದೆ ಎಂದು ಯೋಗಿ ಆರೋಪಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next