Advertisement
ತಂತ್ರಾಂಶ ಸಮೀಕ್ಷೆಯಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಿಕೊಂಡು ಹೋದ ಶಿಕ್ಷಕರಿಗೆ ಈವರೆಗೆ 648 ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬೇರೆ ಶಾಲೆಗಳಲ್ಲಿ ಕಲಿಕೆಯಲ್ಲಿಯೇ ಇದ್ದು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೋದಾಗ ಎರಡೂ ಶಾಲೆಗಳಲ್ಲಿ ತಂತ್ರಾಂಶದಲ್ಲಿ ಮಗುವಿನ ಶೈಕ್ಷಣಿಕ ಮಾಹಿತಿ ಭರ್ತಿ ಮಾಡದಿರುವುದೇ ಈ ಗೊಂದಲಕ್ಕೆ ಕಾರಣವಾಗಿದೆ.
Related Articles
Advertisement
ಎನ್ಜಿಓ ಕಾರ್ಯ: ಸರ್ಕಾರೇತರ ಸಂಘ ಸಂಸ್ಥೆಗಳು ಶಾಲೆಯಿಂದ ಹೊರಗೆ ಉಳಿಯಬಹುದಾದ ಮಕ್ಕಳ ಸಮೀಕ್ಷೆ ಕೈಗೊಂಡು ಅವರನ್ನು ಶಿಕ್ಷಣದಲ್ಲಿ ಮುಂದುವರಿಯುವಂತೆ ಮಾಡುವ ಕೆಲಸ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 15 ಸರ್ಕಾರೇತರ ಸಂಸ್ಥೆಗಳು ಈ ಕಾರ್ಯದಲ್ಲಿ ನಿರತವಾಗಿವೆ. ಈ ಸಂಸ್ಥೆಗಳು ಶಾಲೆಯಿಂದ ಹೊರಗೆ ಉಳಿಯಬಹುದಾದ 850ಮಕ್ಕಳನ್ನು ಗುರುತಿಸಿದ್ದು, 21 ಕೇಂದ್ರಗಳ ಮೂಲಕ ಆರು ತಿಂಗಳ ಅವಧಿ ಅವರಿಗೆ ಶಿಕ್ಷಣ ಮುಂದುವರಿಸುವ ಕಾರ್ಯ ಮಾಡುತ್ತಿವೆ. ಸರ್ಕಾರ ಆರು ತಿಂಗಳ ಅವಧಿಗೆ ಒಂದು ಮಗುವಿಗೆ 12 ಸಾವಿರ ರೂ. ಖರ್ಚು ಮಾಡುತ್ತಿದೆ. ಗ್ರಾಮದ ಹೊರವಲಯದಲ್ಲಿರುವ ತಾಂಡಾದ ಮಕ್ಕಳು, ಹಂಗಾಮು ವೇಳೆ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವ ಪಾಲಕರ ಮಕ್ಕಳು ಋತುಮಾನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಲಾ ಹಂತದ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ಸಮೀಕ್ಷೆ ನಡೆಸುವ ಜತೆಗೆ ಮಧ್ಯಂತರದಲ್ಲಿ ಶಾಲೆ ಬಿಡುವುದನ್ನು ತಪ್ಪಿಸಲು ಅಗತ್ಯ ಜಾಗೃತಿ ಮೂಡಿಸುವ ಕೆಲಸವೂ ಮುಂದುವರಿಸಿದೆ.
ಇಲಾಖೆ ತಂತ್ರಾಂಶದಲ್ಲಿ ಈ ವರ್ಷ ಜಿಲ್ಲೆಯ 1446 ಮಕ್ಕಳ ಮಾಹಿತಿ ಇರಲಿಲ್ಲ. ಹೀಗಾಗಿ ಇಲಾಖೆ ಅವರನ್ನು ಪತ್ತೆ ಹಚ್ಚಲು ಸೂಚಿಸಿದ್ದು, ಈ ವರೆಗೆ 648 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ ಬಹುತೇಕರು ಬೇರೆ ಬೇರೆ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಅವರ ಮಾಹಿತಿ ತಂತ್ರಾಂಶದಲ್ಲಿ ದಾಖಲಾಗದೆ ಗೊಂದಲ ಸೃಷ್ಟಿಯಾಗಿತ್ತು. ಇನ್ನುಳಿದವರ ಪತ್ತೆ ಕಾರ್ಯ ನಡೆದಿದೆ. ಎನ್ಜಿಒಗಳು ಶಾಲೆಯಿಂದ ಹೊರಗುಳಿಯಬಹುದಾದ 850 ಮಕ್ಕಳಿಗೆ ಋತುಮಾನ ಶಾಲೆ ಮೂಲಕ ಶಿಕ್ಷಣ ಮುಂದುವರಿಸುತ್ತಿವೆ. ಪೂರ್ಣ ಸಮೀಕ್ಷೆ ಮುಗಿದ ಬಳಿಕ ಎಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆಂಬ ಮಾಹಿತಿ ಲಭ್ಯವಾಗಲಿದೆ.ಎಸ್.ಎಸ್. ಅಡಿಗ, ಶಿಕ್ಷಣಾಧಿಕಾರಿ ಜಿಲ್ಲೆಯಲ್ಲಿ ಮುಚ್ಚಲು ಯಾವುದೇ ಶಾಲೆಗಳನ್ನು ಗುರುತಿಸಿಲ್ಲ. ಬದಲಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ 27.50ಲಕ್ಷ ರೂ.ಗಳಲ್ಲಿ ಪ್ರಾಥಮಿಕ ಶಾಲೆಗಳ 78 ಶಾಲಾ ಕೊಠಡಿಗಳನ್ನು ಹಾಗೂ 34.30ಲಕ್ಷ ರೂ.ಗಳಲ್ಲಿ ಪ್ರೌಢಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸಲಾಗುತ್ತಿದೆ. 1.55ಕೋಟಿ ರೂ.ಗಳಲ್ಲಿ 47 ಪ್ರಾಥಮಿಕ ಶಾಲಾ ಕೊಠಡಿಗಳನ್ನು ಹಾಗೂ 1.52 ಕೋಟಿ ರೂ.ಗಳಲ್ಲಿ 19 ಪ್ರೌಢಶಾಲೆ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
. ಅಂದಾನೆಪ್ಪ ವಡಗೇರಿ, ಡಿಡಿಪಿಐ, ಹಾವೇರಿ ಎಚ್.ಕೆ. ನಟರಾಜ