Advertisement

ಮತದಾನ ಮುಗಿದ ದಿನವೇ ಮಾಹಿತಿ ನೀಡಿ:ಆಯೋಗಕ್ಕೆ ಆಗ್ರಹ

02:06 AM May 12, 2024 | Team Udayavani |

ಹೊಸದಿಲ್ಲಿ: ಈ ಹಿಂದಿನಂತೆ, ಕೇಂದ್ರ ಚುನಾವಣ ಆಯೋಗವು ಮತದಾನ ಮುಗಿದ ಕೂಡಲೇ ಪೂರ್ಣ ಪ್ರಮಾಣದ ಮತದಾನದ ವಿವರಗಳನ್ನು ನೀಡದಿರುವುದಕ್ಕೆ ದೇಶದ ವಿವಿಧ ಮಾಧ್ಯಮ ಸಂಸ್ಥೆಗಳು ಆಶ್ಚರ್ಯ ಹಾಗೂ ಆಘಾತವನ್ನು ವ್ಯಕ್ತಪಡಿಸಿವೆ. ಪ್ರಸ್‌ ಕ್ಲಬ್‌ ಆಫ್ ಇಂಡಿಯಾ, ಪ್ರಸ್‌ ಅಸೋಸಿಯೇಶನ್‌, ಇಂಡಿಯನ್‌ ವಿಮೆನ್‌ ಪ್ರಸ್‌ ಕಾರ್ಪ್‌Õ, ಫಾರಿನ್‌ ಕರೆಸ್ಪಾಂಡೆನ್ಸ್‌ ಕ್ಲಬ್‌ ಹಾಗೂ  ದಿಲ್ಲಿ ಪತ್ರಕರ್ತರ ಸಂಘಗಳು ಚುನಾವಣ ಆಯೋಗಕ್ಕೆ ಈ ಬಗ್ಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ತೋಡಿಕೊಂಡಿವೆ. ಜತೆಗೆ ಪ್ರತೀ ಹಂತದ ಚುನಾವಣೆ ಮಗಿದ ಬಳಿಕ ಆಯೋಗವು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿವೆ. ಇತ್ತೀಚೆಗೆ ಇದೇ ವಿಷಯಕ್ಕೆ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಯೋಗಕ್ಕೆ ಪತ್ರ ಬರೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next