Advertisement

Missing: ಕನ್ನರ್ಪಾಡಿ; ಮದುವೆಗೆ ಬಂದ ವ್ಯಕ್ತಿ ನಾಪತ್ತೆ

07:13 PM May 09, 2024 | Team Udayavani |

ಮಲ್ಪೆ: ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ರಾಧಕೃಷ್ಣ (50) ಅವರು ನಾಪತ್ತೆಯಾಗಿರುವ ವ್ಯಕ್ತಿ.

Advertisement

ಸುನೀತ ಕೆಳಾರ್ಕಳಬೆಟ್ಟು ಮತ್ತು ಆಕೆಯ ಗಂಡ ರಾಧಕೃಷ್ಣ ಅವರು ಮಂಗಳೂರಿನಿಂದ ಮೇ 1ರಂದು ಕಡೆಕಾರು ಗ್ರಾಮದ ಕನ್ನರ್ಪಾಡಿ ದೇವಿ ಸಭಾಭವನದಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಮದುವೆ ಮುಗಿಸಿ ಸುನೀತ ಅವರು ಮಂಗಳೂರು ತೆರಳಿದ್ದರು. ರಾಧಕೃಷ್ಣ ಅವರು ಮಾತ್ರ ರಾತ್ರಿ ಕಾರ್ಯಕ್ರಮ ಮುಗಿಸಿ ಬರುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಮನೆಗೆ ಬಾರದೆ, ಮದುವೆ ಮನೆಯಲ್ಲಿಯೂ ಇಲ್ಲದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next