Advertisement

ದೆಹಲಿಯಲ್ಲಿ ಜಾಥಾ ಫಾರ್‌ ರಿವರ್‌ ಸಮಾರೋಪ

06:55 AM Oct 03, 2017 | Team Udayavani |

ಹರಿದ್ವಾರ: ದೇಶದ ನದಿಗಳ ರಕ್ಷಣೆಗಾಗಿ ಸದ್ಗುರು ಜಗ್ಗಿ ವಾಸುದೇವ್‌ ಅವರು ಕೈಗೊಂಡಿರುವ “ರ್ಯಾಲಿ ಫಾರ್‌ ರಿವರ್ಸ್‌’ ಅಭಿಯಾನವು 14 ರಾಜ್ಯಗಳು ಹಾಗೂ 9,100 ಕಿ.ಮೀ. ದೂರ ಕ್ರಮಿಸಿ, ಸೋಮವಾರ ದೆಹಲಿಗೆ ತಲುಪಿದೆ. ದೆಹಲಿಯಲ್ಲಿ ಇದು ಸಮಾರೋಪಗೊಳ್ಳಲಿದೆ.

Advertisement

ಭಾನುವಾರ ಅಭಿಯಾನ ಹರಿದ್ವಾರಕ್ಕೆ ತಲುಪಿದ್ದು, ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌, ಯೋಗಗುರು ರಾಮ್‌ದೇವ್‌, ಸ್ವಾಮಿ ಚಿದಾನಂದ ಸರಸ್ವತಿ ಮತ್ತಿತರರು ಈ ಅಭಿಯಾನಕ್ಕೆ ಬೆಂಬಲ ಘೋಷಿಸಿದ್ದರು.
ಇದೇ ವೇಳೆ ಮಾತನಾಡಿದ ಸದ್ಗುರು, “ನಾನು, ನೀವು ಬರುತ್ತೇವೆ, ಹೋಗುತ್ತೇವೆ. ಆದರೆ, ಸಾವಿರಾರು ವರ್ಷಗಳಿಂದ ಇರುವ ನದಿಗಳು ಇನ್ನೂ ಹಲವಾರು ವರ್ಷ ಉಳಿಯುವಂಥದ್ದು. ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ’ ಎಂದರು. ಭಾಷಣ ದಲ್ಲಿ ಬೆಂಗಳೂರನ್ನು ಪ್ರಸ್ತಾಪಿಸಿದ ಅವರು, 50 ವರ್ಷಗಳ ಹಿಂದೆ ಬೆಂಗಳೂರಲ್ಲಿ 3 ನದಿಗಳು, ಸಾವಿರ ಕೆರೆಗಳಿದ್ದವು. ಆದರೆ ಈಗ ನದಿಗಳು ಕಣ್ಮರೆಯಾಗಿವೆ, ಕೆರೆಗಳ ಸಂಖ್ಯೆ 81ಕ್ಕಿಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. 12 ಕೋಟಿ ಮಂದಿ ನಮ್ಮ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಸಂಖ್ಯೆ 60 ಕೋಟಿಯಾಗಬೇಕು ಎನ್ನುವುದು ನನ್ನ ಇಚ್ಛೆ ಎಂದೂ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next