Advertisement

ತೊಕ್ಕೊಟ್ಟು: ಯುವಕನ ಕೊಲೆ

09:40 AM Nov 30, 2019 | mahesh |

ಉಳ್ಳಾಲ: ಇಲ್ಲಿನ ಕಾಪಿಕಾಡ್‌ ಬಳಿಯ ರೈಲು ಹಳಿಯಲ್ಲಿ ಶುಕ್ರವಾರ ರಾತ್ರಿ ಯುವಕನೋರ್ವನ ಶವ ಪತ್ತೆಯಾಗಿದ್ದು, ಈತನನ್ನು ಎಲ್ಲಿಯೋ ಇರಿದು ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬೇಕು ಎಂದು ಶಂಕಿಸಲಾಗಿದೆ.

Advertisement

ಕೊಲೆಗೀಡಾದವನನ್ನು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಪುತ್ತಿಗೆ ನಿವಾಸಿ ಸುದರ್ಶನ್‌ (20) ಎಂದು ಗುರುತಿಸಲಾಗಿದೆ. ಹುಡುಗಿ ವಿಷಯದಲ್ಲಿ ರೌಡಿಶೀಟರ್‌, ಕಾಪಿಕಾಡ್‌ ನಿವಾಸಿ ಡಿ. ಕೆ. ರಕ್ಷಿತ್‌ ಎಂಬಾತನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಚೆಂಬುಗುಡ್ಡೆ ಬಳಿಯ ಲ್ಯಾನ್ಸಿ ಕೊಲೆಯತ್ನ ಸಹಿತ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಕೊಂದು ಪೊಲೀಸರಿಗೆ ತಿಳಿಸಿದ!
“ನಾನು ಓರ್ವನನ್ನು ಕೊಂದು ರೈಲು ಹಳಿಯಲ್ಲಿ ಬಿಸಾಡಿದ್ದೇನೆ. ಈಗ ನಿಮ್ಮ ಕೈಗೆ ಸಿಕ್ಕಿದರೆ ನೀವು ಎನ್‌ಕೌಂಟರ್‌ ಮಾಡಬಹುದು. ನಾಳೆ ಬಂದು ಶರಣಾಗುತ್ತೇನೆ’ ಎಂದು ಆರೋಪಿಯು ನಮಗೆ ತಿಳಿಸಿ ಫೋನ್‌ ಸ್ವಿಚ್‌ ಆಫ್ ಮಾಡಿದ್ದಾನೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next