Advertisement

ತಿಥಿ ಕಾರ್ಯಕ್ಕೂ ತಟ್ಟಿದ ಕರೋನಾ ಬಿಸಿ: ತಿಥಿಕಾರ್ಯ ನಡೆಸುತ್ತಿದ್ದವರನ್ನು ಓಡಿಸಿದ ಪೊಲೀಸರು

09:18 AM Apr 02, 2020 | keerthan |

ಶಿವಮೊಗ್ಗ: ಕೋವಿಡ್-19 ಸೋಂಕಿನ ಕಾರಣದಿಂದ ದೇಶದಲ್ಲಿ ಲಾಕ್ ಡೌನ್ ಹೇರಿದ್ದು, ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ. ಲಾಕ್ ಡೌನ್ ಕಾರಣದಿಂದ ಜಾತ್ರೆಗಳು, ಸಮಾರಂಭಗಳು ರದ್ದಾಗಿದೆ. ಈಗ ತಿಥಿ ಕಾರ್ಯಗಳಿಗೂ ಲಾಕ್ ಡೌನ್ ಬಿಸಿ ತಟ್ಟಿದೆ.

Advertisement

ಇತ್ತೀಚೆಗೆ ಮೃತಪಟ್ಟ ಮೂವರ ತಿಥಿ ಕಾರ್ಯ ಶಿವಮೊಗ್ಗದ ತುಂಗಾ ನದಿ ತಟದಲ್ಲಿ ನಡೆಯುತ್ತಿತ್ತು. ತಿಥಿ ಕಾರ್ಯದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.

ಲಾಕ್ ಡೌನ್ ಹಾಗೂ ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸೇರಿದ್ದ ನೂರಾರು ಜನರನ್ನು ಪೊಲೀಸರು ಓಡಿಸಿದರು.  ಬಳಿಕ ಒಂದಿಬ್ಬರು ಸೇರಿ ತಿಥಿ ಕಾರ್ಯ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next