Advertisement

ಏಕದಿನ ಸರಣಿಗೆ ಲಂಕಾ ತಂಡ

09:23 AM Aug 17, 2017 | Team Udayavani |

ಕೊಲಂಬೊ: ಪ್ರವಾಸಿ ಭಾರತ ತಂಡದೆದುರಿನ ಐದು ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು ತಿಸರ ಪೆರೆರ ಮತ್ತು ಮಿಲಿಂದ ಸಿರಿವರ್ಧನ ಅವರನ್ನು ಕರೆಸಿಕೊಳ್ಳಲಾಗಿದೆ. 

Advertisement

ಸದ್ಯ ಮುಗಿದ ಟೆಸ್ಟ್‌ ಸರಣಿಯಲ್ಲಿ ಆಡಿದ ಎಡಗೈ ಸ್ಪಿನ್ನರ್‌ ಮಲಿಂದ ಪುಷ್ಪ ಕುಮಾರ ಮತ್ತು ಎಡಗೈ ಸೀಮರ್‌ ವಿಶ್ವ ಫೆರ್ನಾಂಡೊ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅವರಿಬ್ಬರೂ ಇನ್ನೂ ಏಕದಿನಕ್ಕೆ ಪಾದಾರ್ಪಣೆಗೈದಿಲ್ಲ. ಗಾಯ ಗೊಂಡಿರುವ ನುವಾನ್‌ ಪ್ರದೀಪ್‌, ಅಸೇಲ ಗುಣರತ್ನೆ ಜತೆ ಬೌಲರ್‌ಗಳಾದ ಅಶಿತಾ ಫೆರ್ನಾಂಡೊ, ನುವಾನ್‌ ಕುಲಶೇಖರ ಮತ್ತು ಲಹಿರು ಕುಮಾರ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರೆಲ್ಲರೂ ಜುಲೈಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಅತ್ಯಂತ ಯಶಸ್ವಿ ಏಕದಿನ ಸರಣಿ ವೇಳೆ ಶ್ರೀಲಂಕಾ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next