Advertisement

ಪ್ರೀತಿಯ ನಾಯಿಯ ನೆನಪಿಗಾಗಿ ದೇವಸ್ಥಾನ!

06:07 PM Apr 05, 2022 | Team Udayavani |

ಚೆನ್ನೈ: ಮೋದಿ ದೇಗುಲ, ಸೋನಿಯಾ ಗಾಂಧಿ ದೇಗುಲ, ಅಮಿತಾಬ್‌ ದೇಗುಲ ನಿರ್ಮಾಣವಾಗಿರುವುದನ್ನು ಕೇಳಿರುತ್ತೀರಿ. ತಮಿಳುನಾಡಿನ ಶಿವಗಂಗಾಗ ಜಿಲ್ಲೆಯ ಮಾನಾಮಧುರೈನ 82 ವರ್ಷದ ನಿವೃತ್ತ ಸರ್ಕಾರಿ ನೌಕರ ಮುತ್ತು ಮುದ್ದಿನ ನಾಯಿಗಾಗಿ ದೇಗುಲ ನಿರ್ಮಿಸಿದ್ದಾರೆ.

Advertisement

2010ರಲ್ಲಿ ಲ್ಯಾಬ್ರಡಾರ್‌ ಬ್ರೀಡ್ ನ‌ ಟಾಮ್‌ ಹೆಸರಿನ ನಾಯಿ ಮರಿ ಸಾಕಲು ಆರಂಭಿಸಿದ್ದರು. ಅದು ಕಳೆದ ವರ್ಷ ಅನಾರೋಗ್ಯದಿಂದಾಗಿ ಸಾವನ್ನಪ್ಪಿದೆ.

ಇದನ್ನೂ ಓದಿ:ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್

ಟಾಮ್‌ ಅನ್ನು ಮಗನಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದ ಮುತ್ತು ಜನವರಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.


80 ಸಾವಿರ ರೂ. ಖರ್ಚಿನಲ್ಲಿ ಅಮೃತಶಿಲೆಯ ಮೂರ್ತಿಯನ್ನೂ ಮಾಡಿಸಿ ಸ್ಥಾಪಿಸಿದ್ದಾರೆ.ಅಷ್ಟೇ ಅಲ್ಲದೆ ಆಗಾಗ ಅದಕ್ಕೆ ಪೂಜೆ, ನೈವೇದ್ಯವನ್ನೂ ಮಾಡುತ್ತಾರಂತೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next