Advertisement

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

11:01 PM Sep 26, 2022 | Team Udayavani |

ತಿರುವನಂತಪುರ: ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಮುಗಿ ಯುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಿದೆ. ಕಳೆದ ರಾತ್ರಿ ತಂಡ ತಿರುವನಂತಪುರಕ್ಕೆ ಬಂದಿಳಿದಿದೆ. ಇಲ್ಲಿ ಬುಧವಾರ ಸರಣಿಯ ಮೊದಲ ಟಿ20 ಪಂದ್ಯ ನಡೆಯಲಿದೆ.

Advertisement

ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಸಂಪ್ರದಾ ಯದಂತೆ ತಿಲಕ ವಿರಿಸಿ, ಮಲ್ಲಿಗೆ ಮಾಲೆ ಹಾಕಿ ಸ್ವಾಗತಿಸಲಾಯಿತು. ಬಳಿಕ ಕ್ರಿಕೆಟಿಗರು ಬಿಗಿ ಭದ್ರತೆಯಲ್ಲಿ ಹೊಟೇಲ್‌ಗೆ ತೆರಳಿದರು. ಸೋಮವಾರ ಮೊದಲ ಸುತ್ತಿನ ಅಭ್ಯಾಸವನ್ನೂ ನಡೆಸಿದರು.

ಈ ಸರಣಿಯ ವೇಳೆ 3 ಟಿ20 ಪಂದ್ಯಗಳ ಜತೆಗೆ 3 ಏಕದಿನ ಪಂದ್ಯಗಳನ್ನೂ ಆಡಲಾಗುವುದು.
ದೇಗುಲ ಭೇಟಿ

ಭಾರತವೀಗ ನವರಾತ್ರಿ ಸಡಗರದಲ್ಲಿದೆ. ಈ ಸಂದರ್ಭ ದಲ್ಲೇ ದಕ್ಷಿಣ ಆಫ್ರಿಕಾ ತಂಡ ದೇವರ ನಾಡಿಗೆ ಆಗಮಿಸಿದೆ. ಈ ತಂಡದಲ್ಲಿರುವ ಭಾರ ತೀಯ ಮೂಲದ ಕೇಶವ್‌ ಮಹಾರಾಜ್‌ ತಿರುವನಂತಪುರದ ಪ್ರಸಿದ್ಧ ದೇವಾಲಯ, ಪದ್ಮನಾಭಸ್ವಾಮಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಸಾಂಪ್ರದಾಯಿಕ ಧೋತಿಯುಟ್ಟ ಕೇಶವ್‌ ಮಹಾರಾಜ್‌ ದೇವಾಲಯಕ್ಕೆ ಆಗಮಿಸಿದ್ದನ್ನು ಯಾರೂ ಗಮನಿಸಲಿಲ್ಲ. ಅಲ್ಲಿಂದ ಮರಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೊಂದನ್ನು ಪೋಸ್ಟ್‌ ಮಾಡಿದ ಬಳಿಕವೇ ಇದು ತಿಳಿದದ್ದು! ಜತೆಗೆ ಎಲ್ಲರಿಗೂ ನವರಾತ್ರಿ ಶುಭಾಶಯ ಕೋರಿದ್ದಾರೆ.

Advertisement

ಉತ್ತರ ಪ್ರದೇಶ ಮೂಲದವರಾದ ಕೇಶವ್‌ ಮಹಾರಾಜ್‌ ಪೂರ್ವಜರು ಕಳೆದ 100 ವರ್ಷ ಗಳಿಂದ ದಕ್ಷಿಣ ಆಫ್ರಿಕಾದಲ್ಲಿ ನೆಲೆ ನಿಂತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next