Advertisement
ದೋಳ್ಪಾಡಿಯ ಜಯಚಂದ್ರ ಗೌಡ ಬೆಂಗಳೂರಿನಲ್ಲಿ ಉದ್ಯಮಿ. ಹಳ್ಳಿಗಾಡಿನಲ್ಲಿ ಕಲಿತ ತಾಯಿ ಪ್ರಮೀಳಾ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಶೋಭಿತ್ ಈ ದಂಪತಿಯ ಪ್ರಥಮ ಪುತ್ರ.
ಶೋಭಿತ್ ಜನಿಸಿ ಸುಮಾರು ಎಂಟು ತಿಂಗಳಾಗುವಾಗ ತಾಯಿಗೆ ಅವನ ವರ್ತನೆಯ ಬಗ್ಗೆ ಸಂಶಯ ಮೂಡಿತ್ತು. ಆದರೆ ಹೇಳಿಕೊಳ್ಳಲು, ವೈದ್ಯರಿಗೆ ತೋರಿಸಲು ಧೈರ್ಯವಿರಲಿಲ್ಲ. ಒಂದು ವರ್ಷ ಮೂರು ತಿಂಗಳಾಗುವಾಗ ಏನೂ ಕಿವಿ ಕೇಳಿಸುವುದಿಲ್ಲ ಎಂಬುದು ತಿಳಿಯಿತು. ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ಶ್ರವಣದೋಷ ತಜ್ಞರಿಗೆ ತೋರಿಸಿದಾಗ ಒಂದು ಕಿವಿ ಶೇ. 90ರಷ್ಟು, ಇನ್ನೊಂದು ಶೇ. 80ರಷ್ಟು ದೋಷಹೊಂದಿರುವುದನ್ನು ದೃಢಪಡಿಸಿದರು. ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿ, ಶ್ರವಣೋಪಕರಣ ಜೋಡಿಸಿದರೆ ಮಗು ಮಾತು ಕಲಿತೀತು; ಆದರೆ ಅದು ನಿಮ್ಮ ಪ್ರಯತ್ನವನ್ನೇ ಅವಲಂಬಿಸಿದೆ ಎಂದಿದ್ದರು. ಸುಮಾರು 10 ಲಕ್ಷ ರೂ.ಗಿಂತ ಹೆಚ್ಚು ಖರ್ಚಾದೀತೆಂದು ಹೇಳಿದ್ದರು. ಆದರೆ ಅಷ್ಟೊಂದು ಹಣವನ್ನು ಹೊಂದಿಸಿಕೊಳ್ಳಲು ದಂಪತಿಗೆ ಒಂದು ವರ್ಷ ಬೇಕಾಯಿತು. ದಕ್ಷಿಣ ಕನ್ನಡ ಕ್ಷೇತ್ರದ ಸಂಸದರ ಮೂಲಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪ್ರಧಾನ ಮಂತ್ರಿಯವರ ನಿಧಿಯಿಂದ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿಯವರ ನಿಧಿಯಿಂದ 1.5 ಲಕ್ಷ ರೂ. ಲಭಿಸಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದು ಒಂದು ಕಿವಿಗೆ ಶ್ರವಣೋಪಕರಣ ಜೋಡಿಸಿದರು. ಒಟ್ಟು ಆಸ್ಪತ್ರೆಯ ಖರ್ಚು 15 ಲಕ್ಷ ರೂ. ಮಿಕ್ಕಿತ್ತು.
Related Articles
Advertisement
ತಪಸ್ಸು ಆರಂಭವಾಗಿದ್ದು ಈಗವೈದ್ಯರು ತಮ್ಮ ಕೆಲಸ ಮುಗಿಸಿದರು. ಇನ್ನೇನಿದ್ದರೂ ತಾಯಿಯದ್ದು. ಮಾತಿನ ಥೆರಪಿಯವರು ಪ್ರಮೀಳಾರಿಗೆ ಮಗುವಿಗೆ ಮಾತು ಕಲಿಸುವುದನ್ನು ಹೇಳಿಕೊಟ್ಟರು. ಅದನ್ನು ತಪಸ್ಸಿನಂತೆ ಪಾಲಿಸಿ, ಮಗುವಿನೊಂದಿಗೆ 24 ಗಂಟೆಯೂ ಕಣ್ಗಾವಲಾಗಿ ಕೆಲಸ ಮಾಡಿದರು. ಉದ್ಯೋಗ ತ್ಯಜಿಸಿ ಎರಡೂವರೆ ವರ್ಷದ ಮಗುವಿಗೆ ಭಾಷೆ ಕಲಿಸತೊಡಗಿದರು. ಮಗುವಿಗೆ 5 ವರ್ಷವಾದಾಗ ಎಲ್ಕೆಜಿಗೆ ಸೇರಿಸಿದರು. ಯು.ಕೆ.ಜಿ.ಗೆ ಬರುವಷ್ಟರಲ್ಲಿ ಶೋಭಿತ್ ಎಲ್ಲರಂತೆ ಮಾತನಾಡತೊಡಗಿದ್ದ. ಈ ಮಧ್ಯೆ
ಮತ್ತೂಂದು ಮಗುವಿಗೆ ಜನ್ಮಕೊಟ್ಟ ಪ್ರಮೀಳಾ, ಹಳ್ಳಿಗೆ ಹಿಂದಿರುಗಿದರೆ ಪತಿ ಬೆಂಗಳೂರಿನಲ್ಲಿ ವ್ಯವಹಾರ ಮುಂದುವರಿಸಿದರು. ಮಗುವಿನ ಬೆಳವಣಿಗೆಯನ್ನು ತಾಯಿಯ ಮೂಲಕ ಕೇಳುವಾಗ ಕಠಿನ ಪರಿಶ್ರಮವಿದ್ದರೆ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದು ಮನವರಿಕೆಯಾಗುತ್ತದೆ. ಈ ಯಶೋಗಾಥೆ ಎಲ್ಲ ತಾಯಂದಿರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.
ತಾರಾನಾಥ ಪಿ. ಸವಣೂರು, ಬಿ.ಐ.ಇ. ಆರ್.ಟಿ ಪ್ರವೀಣ್ ಚೆನ್ನಾವರ