Advertisement

DVS ಕಾಲಿಗೆ ನಮಸ್ಕರಿಸಿ ಬೆಂಬಲ ಕೋರಿದ ಶೋಭಾ ಕರಂದ್ಲಾಜೆ

11:39 PM Mar 18, 2024 | Team Udayavani |

ಬೆಂಗಳೂರು: ಮಾಜಿ ಸಿಎಂ ಸದಾನಂದ ಗೌಡರ 71ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಶುಭಾಶಯ ಕೋರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತನ್ನ ಪರ ಪ್ರಚಾರ ಮಾಡುವಂತೆ ಕೋರಿದ್ದಾರೆ.

Advertisement

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಸದಾನಂದ ಗೌಡರನ್ನು ಭೇಟಿ ಮಾಡಿ ಕಾಲಿಗೆರಗಿದ್ದ ಶೋಭಾ ಅವರು ಸೋಮವಾರವೂ ಸದಾನಂದ ಗೌಡರಿಗೆ ಶಾಲು ಹೊದೆಸಿ, ಹಾರ, ಪೇಟ ಹಾಕಿ ಕಾಲಿಗೆ ಬಿದ್ದು ನಮಸ್ಕರಿಸಿದರು.

ಶೋಭಾ ಕರಂದ್ಲಾಜೆ ಅವರು ವೇದಿಕೆಗೆ ಬಂದರೂ ಗಮನಿಸದಂತಿದ್ದ ಸದಾನಂದ ಗೌಡರಿಗೆ, ಪಕ್ಕದಲ್ಲೇ ಇದ್ದ ಮಾಜಿ ಸಚಿವ ಕೆ.ಗೋಪಾಲಯ್ಯ ಹಾರ ಹಾಕಿ ಶುಭ ಕೋರುತ್ತಿದ್ದಂತೆ ಶೋಭಾ ಕರಂದ್ಲಾಜೆ ಕೂಡ ತಾವು ತಂದಿದ್ದ ಶಾಲನ್ನು ಹೊದಿಸಿದರು. ಒಲ್ಲೆ ಎನ್ನುತ್ತಲೇ ಪೇಟ ತೊಡಿಸಿಕೊಂಡ ಸದಾನಂದ ಗೌಡರ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದರು. ಅಲ್ಲದೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಮ್ಮ ಪರವಾಗಿ ಪ್ರಚಾರಕ್ಕೆ ಬರುವಂತೆಯೂ ಆಹ್ವಾನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next