Advertisement

J&K; ಇಲ್ಲಿ ಕೇಂದ್ರ ಸರಕಾರ ಹೇಳಿಕೊಂಡಿರುವ ಹಾಗೆ ಪರಿಸ್ಥಿತಿ ಇಲ್ಲ: ಒಮರ್ ಅಬ್ದುಲ್ಲಾ

04:16 PM Feb 08, 2024 | Team Udayavani |

ಜಮ್ಮು: ಅಮೃತಸರದ ಇಬ್ಬರು ವ್ಯಕ್ತಿಗಳನ್ನು ಶ್ರೀನಗರದಲ್ಲಿ ಉಗ್ರರು ಗುಂಡಿಕ್ಕಿ ಹತ್ಯೆಗೈದಿರುವ ಬಗ್ಗೆ, ಮಾಜಿ ಸಿಎಂ ಮತ್ತು ಜೆಕೆಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕೇಂದ್ರ ಸರಕಾರ ಹೇಳಿಕೊಂಡಿರುವ ಹಾಗೆ ಪರಿಸ್ಥಿತಿ ಇಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ”ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ನಮಗೆ ದುಃಖ ತಂದಿದೆ.ಇದು ಖಂಡನೀಯ. ಕಳೆದ 2-3 ವರ್ಷಗಳಲ್ಲಿ ಈ ರೀತಿಯ ಉದ್ದೇಶಿತ ಹತ್ಯೆಗಳು ಹೆಚ್ಚಿವೆ” ಎಂದರು.

”ಸರಕಾರ ಹೇಳಿ ಕೊಂಡಿರುವಷ್ಟು ಪರಿಸ್ಥಿತಿ ಇಲ್ಲ ಎಂಬುದನ್ನು ಈ ಕೃತ್ಯ ತೋರಿಸುತ್ತದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ತತ್ ಕ್ಷಣ ಇದೆಲ್ಲವೂ ನಿಲ್ಲುತ್ತದೆ ಎಂದು ಅವರು ಹೇಳಿದ್ದರು. ಅವರು ಈಗ ನಮ್ಮನ್ನು ದೂಷಿಸಲು ಸಾಧ್ಯವಿಲ್ಲ. ಇದು ಅವರದ್ದೇ ವೈಫಲ್ಯ” ಎಂದು ಕಿಡಿ ಕಾರಿದರು.

ಬುಧವಾರ ಸಂಜೆ ಉಗ್ರರು ಕಾಶ್ಮೀರೇತರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಗುಂಡಿನ ದಾಳಿಗೆ ಇಬ್ಬರು ಪಂಜಾಬಿಗಳಾದ ಅಮೃತಪಾಲ್ ಸಿಂಗ್( 31) ಮತ್ತು ರೋಹಿತ್(25)ಬಲಿಯಾಗಿದ್ದರು. ಇಬ್ಬರು ಉದ್ಯೋಗಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next