Advertisement

Theft Case: ಶೃಂಗೇರಿಯಲ್ಲಿ ಕಳ್ಳರನ್ನು ಬಂಧಿಸಿದ ತೀರ್ಥಹಳ್ಳಿ ಪೊಲೀಸರು !

11:22 AM Feb 23, 2024 | Kavyashree |

ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿಯ ಟ್ರೇಡರ್ಸ್ ವೊಂದರಲ್ಲಿ 2.50 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಕಾರು ಸಮೇತ ಶೃಂಗೇರಿಯಲ್ಲಿ ಸೆರೆ ಹಿಡಿಯಲಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ಮಹಮ್ಮದ್ ಶಾದು(24), ಜೆಶಾನ್ (17), ಜಮ್ಮಿದ್ (23) ಬಂಧಿತ ಆರೋಪಿಗಳು.

ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ಟೇಬಲ್ ರಾಡ್ ಬಳಸಿ 2.5 ಸಾವಿರ ರೂ. ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾದ ಕಳ್ಳರನ್ನು ಪೊಲೀಸರ ಮಿಂಚಿನ ಕಾರ್ಯಾಚರಣೆ ಮೂಲಕ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು.

ಆರೋಪಿಗಳನ್ನು ತೀರ್ಥಹಳ್ಳಿಯ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ದಫೆದಾರ್ ಪುನೀತ್, ದೀಪಕ್ ಗೌಡ ಮತ್ತು ತಂಡದವರು ಕೆಲವೇ ಗಂಟೆಗಳಲ್ಲಿ ಶೃಂಗೇರಿಯ ಬಳಿ ಬಂಧಿಸಿದ್ದು, ತೀರ್ಥಹಳ್ಳಿ ಪೊಲೀಸ್ ಇಲಾಖೆಯ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next