Advertisement

Thirthahalli ಸರ್ಕಾರ ಬದಲಾದರು ಬಸವರಾಜ್ ಬೊಮ್ಮಾಯಿಯೇ ಮುಖ್ಯಮಂತ್ರಿ !

08:27 PM Aug 16, 2023 | Shreeram Nayak |

ತೀರ್ಥಹಳ್ಳಿ : ಪಟ್ಟಣದ ಅಜಾದ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಎದುರು ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಬ್ಯಾನರ್ ವೊಂದು ಹಾಕಿದ್ದು ಅದರಲ್ಲಿ ಬಸವರಾಜ್ ಬೊಮ್ಮಾಯಿ ( ಸನ್ಮಾನ್ಯ ಮುಖ್ಯಮಂತ್ರಿಗಳು ) ಎಂಬುದಾಗಿ ಇದೆ.

Advertisement

ಸರ್ಕಾರ ಬದಲಾಗಿ ಮೂರು ತಿಂಗಳಾದರೂ ಕೂಡ ಈ ಬ್ಯಾನರ್ ಬದಲಾವಣೆ ಮಾಡದೇ ಇರುವುದು ಶೋಚನೀಯ ಸಂಗತಿಯಾಗಿದೆ. ಲೋಕೋಪಯೋಗಿ ಇಲಾಖೆಯ ಎದುರೇ ಇರುವ ಈ ಬ್ಯಾನರ್ ಅಲ್ಲಿನ ಅಧಿಕಾರಿಗಳು ಗಮನಿಸಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಬ್ಯಾನರ್ ಗಳನ್ನು ಹಾಕುವುದಕ್ಕೆ ಅನುಮತಿ ನೀಡುವ ಮುಖ್ಯಾಧಿಕಾರಿಗಳಿಗೆ ಈ ಬ್ಯಾನರ್ ಕಾಣಿಸಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next