Advertisement

Puttur ಅರಿಯಡ್ಕ ಗ್ರಾಮದ ವಿವಿಧೆಡೆ ಕಳ್ಳರ ಹಾವಳಿ

10:06 PM Nov 28, 2023 | Team Udayavani |

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು, ಮಡ್ಯಂಗಳ, ಮದ್ಲ ಪ್ರದೇಶಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ನ.27ರ ರಾತ್ರಿ ನಡೆದಿದೆ.

Advertisement

ಕಳ್ಳರ ತಂಡವೊಂದು ಇಲ್ಲಿನ ಮನೆ, ಅಂಗಡಿಯಿಂದ ಕಳ್ಳತನ ನಡೆಸಿದೆ. ಕೌಡಿಚ್ಚಾರು ಜಂಕ್ಷನ್‌ನ ಉಮೇಶ್‌ ಗೌಡ ಅವರ ಅಂಗಡಿಯ ಮಾಡಿನ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಚಿಲ್ಲರೆ ಹಣ ಹಾಗೂ ಸಿಗರೇಟ್‌ ದೋಚಿದ್ದಾರೆ. ಇದರ ಮೌಲ್ಯ ಸುಮಾರು 6 ಸಾವಿರ ಎಂದು ಅಂದಾಜಿಸಲಾಗಿದೆ.

ಮದ್ಲದಲ್ಲಿರುವ ದಿನಕರ ಬೋರ್ಕರ್‌ಅವರ ಮನೆ ವಠಾರದಿಂದ ಒಣಗಲು ಹಾಕಿದ್ದ 3 ಸಾವಿರಕ್ಕೂ ಅಧಿಕ ಅಡಿಕೆ ಕದ್ದೊಯ್ದಿದ್ದಾರೆ.

ಮಡ್ಯಂಗಳದ ಗೋಪಾಲಕೃಷ್ಣ ಭಟ್‌ ಅವರ ಮನೆಯ ವಠಾರದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಅಡಿಕೆ ಕದ್ದೊಯ್ದು ಇದರಲ್ಲಿ ಒಂದು ಗೋಣಿ ಚೀಲ ಅಡಿಕೆಯನ್ನು ಗೇಟ್‌ ಬಳಿ ಎಸೆದು ಹೋಗಿದ್ದಾರೆ. ಇದರ ಮೌಲ್ಯ ಸುಮಾರು 9 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಪೊಲೀಸರು ಪರಿಶೀಲನೆ
ಮಾಡುತ್ತಿರುವಾಗಲೇ ಕಳ್ಳತನ !
ಮದ್ಲ ದಿನಕರ ಬೋರ್ಕರ್‌ಅವರ ಮನೆಯಿಂದ ರಾತ್ರಿ 10 ಗಂಟೆ ಸುಮಾರಿಗೆ ಕಳ್ಳತನ ನಡೆದಿದ್ದು ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ತತ್‌ಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರ ಬಗ್ಗೆ ತನಿಖೆ ನಡೆಸುತ್ತಿದ್ದರು. ಈ ವೇಳೆಗಾಗಲೇ ಕೌಡಿಚ್ಚಾರುನಲ್ಲಿ ಅಂಗಡಿ ಮತ್ತು ಮಡ್ಯಂಗಳದಲ್ಲಿ ಮನೆಯಿಂದ ಕಳ್ಳತನ ನಡೆದಿದೆ. ಒಂದು ಕಡೆಯಲ್ಲಿ ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿರುವಾಗಲೇ ಅಲ್ಲೇ ಆಸುಪಾಸಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next