Advertisement

ಸ್ಟುಡಿಯೋಗೆ ಕನ್ನ ಹಾಕಿದವರ ಹೆಡೆಮುರಿ ಕಟ್ಟಿದ ಪೊಲೀಸರು

05:50 PM Jun 06, 2021 | Team Udayavani |

ಧಾರವಾಡ: ಇಲ್ಲಿನ ಮಂಜುನಾಥಪುರದ ಸ್ವಾತಿ ಫೋಟೋ ಸ್ಟುಡಿಯೋಗೆ ಕನ್ನ ಹಾಕಿದ್ದ ಇಬ್ಬರು ಕದೀಮರನ್ನು ವಿದ್ಯಾಗಿರಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

Advertisement

ಬಂಧಿತರನ್ನು ಲಕ್ಷ್ಮೀಸಿಂಗನಕೇರಿ ನಿವಾಸಿ ಸುನೀಲ ಅಲಿಯಾಸ್‌ ಚೋರ ಸುನ್ಯಾ ಹನುಂತಪ್ಪ ಶೀತಿಮನಿ ಹಾಗೂ ಬಸವರಾಜ ಡಂಬರಿಕೊಪ್ಪ ಉರ್ಫ್‌ ಆಯಟ್ಟಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕಳ್ಳತನಕ್ಕೆ ಬಳಕೆ ಮಾಡಿದ್ದ ಬೈಕ್‌, ಕಬ್ಬಿಣದ ರಾಡ್‌ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಬೆಲೆ ಬಾಳುವ ಕ್ಯಾಮರಾ ಲೆನ್ಸ್‌ಗಳನ್ನು ವಶಕ್ಕೆ ಪಡೆಯಾಗಿದ್ದು, ಇವುಗಳ ಬೆಲೆ ಅಂದಾಜು 4.16 ಲಕ್ಷ ರೂ. ಎನ್ನಲಾಗಿದೆ.

ವಿದ್ಯಾಗಿರಿ ಠಾಣೆ ಇನ್ಸ್‌ಪೆಕ್ಟರ್‌ ಮಹಾಂತೇಶ ಬಸಾಪುರ ನೇತೃತ್ವದಲ್ಲಿ ಪಿಎಸ್‌ಐ ಸಚಿನಕುಮಾರ ದಾಸರಡ್ಡಿ, ಎಸ್‌.ಆರ್‌. ತೇಗೂರ, ದೇವೇಂದ್ರ ಮಾವಿನಿಂಡಿ, ಎಎಸ್‌ಐ ಬಿ.ಎಂ. ಅಂಗಡಿ, ಸಿಬ್ಬಂದಿ ಎಂ.ಎಫ್‌. ನದಾಫ್‌, ಬುರ್ಜಿ, ಅತ್ತಾರ, ಪಠಾತ್‌, ಮಂಕಣಿ, ಪಾಟೀಲ, ಮಾದರ, ಸಾಂಗ್ಲಿಕರ್‌, ಹುಯಿಲಗೋಳ, ಗೋಡು ನಾಯ್ಕರ ಹಾಗೂ ಮಕಾನದಾರ ಅವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next