Advertisement

ತಮಿಳುನಾಡಿಗೆ ಬಿಡಲು ನೀರಿಲ್ಲ: ಎಂ.ಬಿ.ಪಾಟೀಲ್‌

06:45 AM Feb 01, 2018 | Team Udayavani |

ಬೆಂಗಳೂರು: ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ತಮಿಳುನಾಡಿನ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Advertisement

ಕಾವೇರಿ ನೀರು ಬಿಡುವಂತೆ ತಮಿಳುನಾಡು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮಿಳುನಾಡು ಮುಖ್ಯಮಂತ್ರಿ ಪಳನಿ ಸ್ವಾಮಿ ಮಾತುಕತೆಗೆ ಬರುವುದಾದರೆ ಸ್ವಾಗತಿಸುತ್ತೇವೆ. ಅವರು ಮಾತುಕತೆಗೆ ಬಂದಾಗ ರಾಜ್ಯದ ನೀರಿನ ಕೊರತೆಯ ಪರಿಸ್ಥಿತಿಯನ್ನು ವಿವರಿಸುತ್ತೇವೆಂದು ತಿಳಿಸಿದರು. ನಾವೂ ಸಂಕಷ್ಟದಲ್ಲಿದ್ದೇವೆ. ನಮ್ಮ ಬೆಳೆಗಳು ಮತ್ತು ಕುಡಿಯಲು ನೀರು ಬೇಕು. ನಮ್ಮಲ್ಲಿ ನೀರಿದ್ದಿದ್ದರೆ, ತಮಿಳುನಾಡಿಗೆ ಬಿಡುತ್ತಿದ್ದೆವು. ತಮಿಳುನಾಡಿನ ನಿಯೋಗ ಬಂದರೆ ಸೌಹಾರ್ದಯುತವಾಗಿ ಮಾತನಾಡಿ ಕಾವೇರಿ ಕೊಳ್ಳದ ವಾಸ್ತವ ವರದಿ ಮನವರಿಕೆ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next