Advertisement

ಹರಿಹರ ಕ್ಷೇತ್ರದಲ್ಲಿ ನೀರಿನ ಕೊರತೆ ಇಲ್ಲ

10:57 PM Jun 07, 2019 | Sriram |

ಉಡುಪಿ: ಹಾವಂಜೆ ಗ್ರಾಮದ ಕೀಳಿಂಜೆಯ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ದೇವಸ್ಥಾನದ ಕೆರೆಯಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲಿ ನೀರು ಕಂಡುಬರುತ್ತದೆ. ಈ ಬಾರಿ ಎಲ್ಲ ಕಡೆಯ ಕೆರೆ, ಬಾವಿಗಳು ಬತ್ತಿ ಹೋದರೂ ಇಲ್ಲಿ ಮಾತ್ರ ಜಲಸಮೃದ್ಧಿ ಇದೆ.

Advertisement

ಇದೇ ಸ್ಥಳದ ಮೇಲಿನ ಗುಡ್ಡದಿಂದ ನೀರು ಹರಿದುಬರುತ್ತಿದೆ. ಇದರಿಂದಲೇ ಕೆರೆ ಒಣಗದೆ ನೀರಿನಿಂದ ಕೂಡಿದೆ. ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಅಕೇಶಿಯಾ ಕಾಡು ಬೆಳೆಸಿದರೂ ಪ್ರಕೃತಿ ಇದುವರೆಗೆ ಮುನಿಸಿಕೊಳ್ಳದೆ ಜಲರಾಶಿಯನ್ನು ಕೊಡುತ್ತಿದೆ. ವಿಶೇಷವೆಂದರೆ ಅಕ್ಕಪಕ್ಕದಲ್ಲಿ ನೀರಿನ ಕೊರತೆ ಇದ್ದರೂ ಇಲ್ಲಿ ಮಾತ್ರ ಕೊರತೆ ಆಗಿಲ್ಲ.

ಸ್ಥಳೀಯರು, ಸಮಾಜಾಸಕ್ತರು ಸೇರಿ ಅರ್ಚಕ ಶ್ರೀಕಾಂತ್‌ ಭಟ್ಟರಿಂದ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ಕೆರೆಗೆ ಗಂಗಾರತಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next