Advertisement

10 ತಿಂಗಳಾದರೂ ಪರಿಹಾರವಿಲ್ಲ!

01:10 AM May 10, 2019 | Team Udayavani |

ಉಪ್ಪಿನಂಗಡಿ: ಮಳೆಗಾಲದಲ್ಲಿ ನದಿಗಳ ಸಂಗಮದಿಂದ ಕೃಷಿ ಭೂಮಿಗಳ ನಷ್ಟ ಸಂಭವಿಸಿ ವರ್ಷವೇ ಆಗುತ್ತ ಬಂದರೂ ನಯಾ ಪೈಸೆ ಪರಿಹಾರದ ಮೊತ್ತ ರೈತರಿಗೆ ಬಂದಿಲ್ಲ. ಹತ್ತು ತಿಂಗಳ ಹಿಂದೆ ನೇತ್ರಾವತಿ ಹಾಗೂ ಕುಮಾರಾಧಾರಾ ನದಿಗಳು ಉಕ್ಕಿ ಹರಿದು ಸಂಗಮವಾಗಿ ತಗ್ಗು ಪ್ರದೇಶದ ತೋಟ ಹಾಗೂ ಗದ್ದೆಗಳಲ್ಲಿ ತಿಂಗಳ ಕಾಲ ನೀರು ನಿಂತು ಅಡಿಕೆ, ಭತ್ತದ ಕೃಷಿ ನಷ್ಟಕ್ಕೆ ಒಳಗಾಗಿತ್ತು.

Advertisement

ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಾಲೂಕು ದಂಡಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರನ್ನು ಒಳಗೊಂಡ ತಂಡ ಒಂದಡೆ ಭೇಟಿ ನೀಡಿ ಪರಿಶೀಲಿಸಿತ್ತು. ಪುತ್ತೂರು ಶಾಸಕ ಸಂಜೀವ ಮಠಂದೂರು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್‌ಕುಮಾರ್‌ ಕಟೀಲು ಅವರು ನಟ್ಟಿಬೈಲು ಸಹಿತ ಹಲವು ಕಡೆಗಳಲ್ಲಿ ಸಂಭವಿಸಿದ ನಷ್ಟದ ಕುರಿತು ಅಧ್ಯಯನ ನಡೆಸಿ, ಪ್ರಾಕೃತಿಕ ವಿಕೋಪದಡಿ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ.

ಹಳೇಗೇಟು ಸಮೀಪ ಹಲವು ಮನೆಗಳಿಗೆ ನೀರು ಹರಿದು ನಷ್ಟ ಸಂಭವಿಸಿತ್ತು. ಪಟ್ಟಣದ ಮುಖ್ಯ ಚರಂಡಿ ನೀರು ತುಂಬಿ ನೆರೆ ನೀರು ಅಕ್ಕಪಕ್ಕದ ಅಂಗಡಿಗಳ ದಾಸ್ತಾನು ನಷ್ಟವಾಗಿತ್ತು. ಇಷ್ಟಾದರೂ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಹ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪರಿಹಾರ ಬಂದಿಲ್ಲ
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಷ್ಟವನ್ನು ಪರಿಶೀಲಿಸಿದ್ದಾರೆ. ಈವರೆಗೂ ಪರಿಹಾರ ಬಂದಿಲ್ಲ ಎಂದು ಗ್ರಾ.ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ಹರೀಶ್‌ ನಟ್ಟಿಬೈಲು ಹೇಳಿದ್ದಾರೆ.

ಪರಿಹಾರ ಜಮೆಯಾಗಿದೆ
ಕಳೆದ ವರ್ಷ ಪ್ರಾಕೃತಿಕ ವಿಕೋಪದಡಿ ಅರ್ಜಿ ಸಲ್ಲಿಸಿದವರಿಗೆ ಈಗಾಗಲೇ ಹಿಂಬರಹ ಕೊಟ್ಟಿದ್ದು, ಅತಿವೃಷ್ಟಿ ಪರಿಹಾರ ಯೋಜನೆಯಡಿ ಪರಿಹಾರವನ್ನು ವಿತರಿಸಲಾಗಿದೆ. ಅದನ್ನು ಸರಕಾರದಿಂದ ನೇರವಾಗಿ ಫ‌ಲಾನುಭವಿಗಳ ಖಾತೆಗಳಿಗೆ ಜಮೆ ಮಾಡಲಾಗಿದೆ.
– ಚಂದ್ರ ನಾೖಕ್‌, ಗ್ರಾಮ ಕರಣಿಕರು, ಉಪ್ಪಿನಂಗಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next