Advertisement

ನನ್ನ 40 ವರ್ಷದ ರಾಜಕೀಯದಲ್ಲಿ ಒಂದೇ ಒಂದು ಕ್ರಿಮಿನಲ್‌ ಕೇಸ್‌ ಇಲ್ಲ

03:36 PM May 02, 2018 | Team Udayavani |

ಹಾವೇರಿ: ‘ನನ್ನನ್ನು ಜೈಲಿಗೆ ಕಳುಹಿಸಲು ಯಡಿಯೂಪ್ಪ ಯಾರು ? ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ  ಒಂದೇ ಒಂದು ಕ್ರಿಮಿನಲ್‌ ಕೇಸ್‌ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. 

Advertisement

ಬುಧವಾರ ರಟ್ಟಿಹಳ್ಳಿಯಲ್ಲಿ  ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ‘ಯಡಿಯೂರಪ್ಪ ಕಾನೂನು, ಗೀನೂನು ಒದಿಕೊಂಡಿಲ್ಲ .ಬಾಯಿಗೆ ಬಂದಾಗೆ ಮಾತನಾಡ್ತಾನೆ. ನನ್ನನ್ನು ಜೈಲಿಗೆ ಕಳುಹಿಸುತ್ತಾನಂತೆ,ಏನು ನನ್ನ ಮೇಲೆ 23 ಕೇಸ್‌ಗಳಿವೆಯಾ ? ನನ್ನ ಇಡೀ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕೇಸು ದಾಖಲಾಗಿಲ್ಲ. ಯಡಿಯೂರಪ್ಪನಿಗೆ ಮಾನ ಮರ್ಯಾದೆ ಇಲ್ಲ, ನಾಚಿಗೆಯಾಗಬೇಕು’ ಎಂದು ಕಿಡಿ ಕಾರಿದರು. 

‘ಹಾವೇರಿಯಲ್ಲಿ  ರೈತರು ಗೊಬ್ಬರ ಕೊಡ್ರಿ, ಬೀಜ ಕೊಡ್ರಿ  ಎಂದು ಕೇಳಿದ್ರಿ. ಇದೇ ಯಡಿಯೂರಪ್ಪ  ಗೋಲಿ ಬಾರ್‌ ಮಾಡಿ ಇಬ್ಬರು ರೈತರನ್ನು ಕೊಂದು ಹಾಕಿದವ. ಯಡಿಯೂರಪ್ಪನಿಗೆ ರೈತರು ವೋಟ್‌ ಕೊಡಬೇಕಾ’ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next