Advertisement

ಕೃಷಿ ಭೂಮಿಯಲ್ಲಿ ರೆಸಾರ್ಟ್‌ ಇಲ್ಲ: ಉಪೇಂದ್ರ

07:35 AM Dec 12, 2017 | Team Udayavani |

ಬೆಳಗಾವಿ: ನಾನು ಹಾಗೂ ನನ್ನ ಅಣ್ಣ ಸೇರಿ ರೆಸಾರ್ಟ್‌ ಮಾಡಲು ಜಾಗವನ್ನು  10 ವರ್ಷಗಳ ಹಿಂದೆಯೇ ಖರೀದಿಸಿದ್ದೆವು. ಅಲ್ಲಿಯೇ ರೆಸಾರ್ಟ್‌ ಮಾಡಲಾಗಿದ್ದು, ಇದರ ಎಲ್ಲ ದಾಖಲೆ ಪತ್ರಗಳು ನಮ್ಮ ಬಳಿ ಇವೆ. ಅದರ ಹಿಂದೆ ನಮ್ಮ ಕೃಷಿ ಜಮೀನು ಇದ್ದು, ಅಲ್ಲಿ ಕೃಷಿ ಕಾರ್ಯ ಮಾಡಲಾಗುತ್ತಿದೆ ಎಂದು ನಟ ಉಪೇಂದ್ರ ಹೇಳಿದರು. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸಾರ್ಟ್‌ ಜಾಗವೇ ಬೇರೆ, ಕೃಷಿ ಭೂಮಿಯೇ ಬೇರೆ. ಕೃಷಿ ಜಮೀನಿನಲ್ಲಿ ರೆಸಾರ್ಟ್‌ ಮಾಡಿಲ್ಲ. ಈ ಬಗ್ಗೆ ಎಸ್‌.ಆರ್‌. ಹಿರೇಮಠ ಮಾಡಿರುವ ಆರೋಪ ಸುಳ್ಳು. ನ್ಯಾಯಾಲಯದ ತೀರ್ಪಿನ ನಂತರವೂ ಹಿರೇಮಠ ಅವರು ಆರೋಪ ಮಾಡುತ್ತಿರುವುದು ಸರಿ ಅಲ್ಲ ಎಂದು ನಟ ಉಪೇಂದ್ರ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next