Advertisement

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ: ಈಶ್ವರಪ್ಪ

10:57 PM Apr 08, 2024 | Shreeram Nayak |

ಭದ್ರಾವತಿ: ರಾಜ್ಯ ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲವಾಗಿದೆ. ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡಲು ಪ್ರಶ್ನೆ ಮಾಡುವ ವಿರೋಧಿಗಳನ್ನು ಮೂಲೆಗುಂಪು ಮಾಡಿಸಿದ್ದಾರೆ. ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿಕೊಂಡು ಹೋದವರನ್ನೇ ರಾಜ್ಯದಲ್ಲಿ ವರಿಷ್ಠರು ಮುಂದಿಟ್ಟುಕೊಂಡಿರುವುದು ವಿಷಾ ದನೀಯ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಸೋಮವಾರ ತನ್ನ ಲೋಕಸಭೆ ಚುನಾವಣೆಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ನನ್ನನ್ನು ರಾಜಕೀಯದಿಂದ ದೂರವಿರಲು ಹೇಳಿದಾಗ ಒಪ್ಪಿದ್ದೆ. ಆದರೆ ಯಡಿಯೂರಪ್ಪ ಮಾತ್ರ ರಾಜಕೀಯದಲ್ಲಿ ಉಳಿದದ್ದು ಯಾಕೆ? ಅವರು ಹೇಳಿದಂತೆಲ್ಲ ಕೇಳಿ ಮೋಸ ಹೋದೆ. ಇವೆಲ್ಲವನ್ನು ಖಂಡಿಸಿ ಆ ಕುಟುಂಬಕ್ಕೆ ಪಾಠ ಕಲಿಸಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next