Advertisement

K. S. Eshwarappa ಸಂಧಾನದ ಎಲ್ಲ ಬಾಗಿಲು ಬಂದ್‌

11:54 PM Apr 15, 2024 | Team Udayavani |

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ಕಟ್ಟಾಳು ಕೆ.ಎಸ್‌.ಈಶ್ವರಪ್ಪ ವಿಚಾರ ಪಕ್ಷಕ್ಕೆ ಇನ್ನೂ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸಂಧಾನದ ಎಲ್ಲ ಬಾಗಿಲುಗಳು ಮುಚ್ಚಿಕೊಳ್ಳುವ ಹಂತ ತಲುಪಿದೆ.

Advertisement

ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದರೂ ವಾಪಸ್‌ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಸಂಘ-ಪರಿವಾರದ ಹಿರಿಯರಲ್ಲಿತ್ತು. ಅದು ಈಗ ಹುಸಿಯಾಗುವ ಲಕ್ಷಣ ಕಾಣುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಸಹಿತ ಯಾರೊಬ್ಬರೂ ಈಶ್ವರಪ್ಪ ಜತೆಗೆ ಮಾತುಕತೆಗೆ ಸಿದ್ಧರಿಲ್ಲ. ಹೀಗಾಗಿ ನಾಮಪತ್ರ ಹಿಂಪಡೆಯುವ ಕೊನೆಯ ಕ್ಷಣದವರೆಗೆ ಕಾಯ್ದು ಆ ಬಳಿಕ ಉಚ್ಚಾಟನೆ ಮಾಡುವ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next