Advertisement

ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಗೊಂದಲ ಮೂಡಿಸುವ ಅವಶ್ಯಕತೆ ಇಲ್ಲ : ಬಿ.ಎನ್.ಬಚ್ಚೇಗೌಡ

12:37 PM Nov 01, 2019 | Suhan S |

ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆ ಶಿವಕುಮಾರ್ ಗೊಂದಲ ಮೂಡಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈಗಾಗಲೇ ಚಿಕ್ಕಬಳ್ಳಾಪುರಕ್ಕೆ‌ ಮೆಡಿಕಲ್ ಕಾಲೇಜು ಕೊಡಲು ತೀರ್ಮಾನಿಸಿದೆ ಎಂದರು. ಜಾಗ ಗುರುತಿಸಿ 150 ಕೋಟಿ ಅನುದಾನ ಸಹ ಬಿಡುಗಡೆ ಆಗಿದೆ ಎಂದರು. ಡಿಕೆಶಿ ಶಿವಕುಮಾರ್ ಕನಪುರಕ್ಕೆ ಬೇಕಾದ್ದರೆ ಮತ್ತೊಂದು ಮೆಡಿಕಲ್‌ ಕಾಲೇಜು ತಗೊಳ್ಳಿ ಎಂದರು.

ಕನಕಪುರದಿಂದ ಚಿಕ್ಕಬಳ್ಳಾಪುರ ಕ್ಕೆ ವರ್ಗಾವಣೆ ಆಗಿರುವುದನ್ನು ನಾನು ಒಪ್ಪಲ್ಲ. ಅವರ ಕಾಲೇಜು ಅವರು ಮಾಡಿಕೊಳ್ಳಲಿ ಎಂದರು. ಮಂಚೇನಹಳ್ಳಿ ತಾಲೂಕು ಆಗಿರೋದು ಒಳ್ಳೆಯ ಕಾರ್ಯ. ಮೆಡಿಕಲ್‌ ಕಾಲೇಜು ಆಸ್ಪತ್ರೆ ಆಗ್ತಿರೋದು ಒಳ್ಳೆಯ ಕಾರ್ಯ. ಯಡಿಯೂರಪ್ಪ ನವರು ಬಂದು ಉದ್ಗಾಟನೆ ಮಾಡಲಿದ್ದಾರೆ‌.  ನವೆಂಬರ್ 8 ರಂದು ಕಾರ್ಯಕ್ರಮ ನಿಗದಿಯಾಗಿದೆ ಎಂದರು

ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡುವ ವಿಚಾರದಲ್ಲಿ ಮಾತಾನಾಡಿದ ಅವರು ರಾಜ್ಯ ಸರ್ಕಾರದ ತೀರ್ಮಾನಕ್ಕೆ ನಾವು ಒಪ್ಪಿಗೆ ಕೊಡಬೇಕು.ಟಿಪ್ಪು ಜಯಂತಿಯನ್ನು ಸಹ ಆಚರಣೆ ಮಾಡವುದಿಲ್ಲ.ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ‌ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next