Advertisement

ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇಗುಲ ಡಿನೋಟಿಪೈ ಪ್ರಸ್ತಾಪವಿಲ್ಲ

10:13 AM Sep 09, 2019 | sudhir |

ಗಂಗಾವತಿ: ತಾಲ್ಲೂಕಿನ ಇತಿಹಾಸಪ್ರಸಿದ್ದ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇಗುಲವನ್ನು ಡಿನೋಟಿಪೈ ಮಾಡಿ ಖಾಸಗಿ ವ್ಯಕ್ತಿ ಅಥವಾ ಟ್ರಸ್ಟ್ ಗೆ ಕೊಡುವ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

Advertisement

ಅಂಜನಾದ್ರಿ ಬೆಟ್ಟದ ದೇಗುಲಕ್ಕೆ ವಾರ್ಷಿಕ ಒಂದುಕೋಟಿ ರೂ.ಗಳ ಆದಾಯವಿದ್ದು ಖಾಸಗಿಯವರಿಗೆ ಕೊಡುವ ಮೂಲಕ ಆದಾಯ ಅನ್ಯರ ಪಾಲಾಗದಂತೆ ತಡೆಯಲಾಗಿದೆ. ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಡಿನೋಟಿಪೈ ಪ್ರಶ್ನೆ ಯೇ ಇಲ್ಲ. ಮುಜರಾಯಿ ಖಾತೆಗೆ ಕೋಟಾ ಶ್ರೀನಿವಾಸ ಪೂಜಾರಿ ಹೊಸದಾಗಿ ಸಚಿವರಾಗಿದ್ದು ದೇಗುಲದ ಅಭಿವೃದ್ಧಿ ಕಾರ್ಯಚಟುವಟಿಕೆ ಬಗ್ಗೆ ಚರ್ಚೆ ನಡೆಸಲು ದೇಗುಲದ ಆಡಳಿತಾಧಿಕಾರಿ ಹಾಗು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಬೆಂಗಳೂರಿಗರ ಆಹ್ವಾನಿಸಿ ಚರ್ಚೆ ನಡೆಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next