Advertisement

Kundapura ಭಾಗದ ಅಪರಾಧ ಸುದ್ದಿಗಳು

08:49 PM May 07, 2024 | Team Udayavani |

ಕೆಂಚನೂರು: ಕೆರೆಗೆ ಬಿದ್ದು ಯುವಕ ಸಾವು

Advertisement

ಕುಂದಾಪುರ: ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ಕೆಂಚನೂರು ಗ್ರಾಮದ ವೆಂಕ ಅವರ ಪುತ್ರ ಸುಧೀಂದ್ರ (31) ಅವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಮನೆಯಿಂದ ಹೋದ ಅವರು ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕೆರೆ ಸಮೀಪ ಬಂಡೆಯ ಬಳಿ ಚಪ್ಪಲಿ ಹಾಗೂ ಗಾಳದ ಬೆಂಡು ನೀರಿನಲ್ಲಿ ಪತ್ತೆಯಾಗಿತ್ತು. ಅನುಮಾನಗೊಂಡು ಈಜುಗಾರರನ್ನು ಕರೆಸಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದಾವರ: ನದಿಗೆ ಬಿದ್ದು ಅಪರಿಚಿತ ಸಾವು

ಕುಂದಾಪುರ: ಕಂದಾವರ ಪರಿಸರದಲ್ಲಿ ತಿರುಗಾಡಿಕೊಂಡಿದ್ದ ಸುಮಾರು 35 ಪ್ರಾಯದ ಅಪರಿಚಿತ ವ್ಯಕ್ತಿ ಸಟ್ವಾಡಿ ತಿರುವಿನಲ್ಲಿರುವ ನದಿಗೆ ನೀರು ಕುಡಿಯಲು ಹೋಗಿ ಆಯತಪ್ಪಿ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

Advertisement

ಈ ಬಗ್ಗೆ ಕಂದಾವರ ಪಂಚಾಯತ್‌ ಅಧ್ಯಕ್ಷೆ ಅನುಪಮಾ ಯು. ಅವರು ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಬಸ್‌ಗೆ ಢಿಕ್ಕಿ; ಬೈಕ್‌ ಸವಾರರಿಗೆ ಗಾಯ

ಕುಂದಾಪುರ: ಸರ್ಜನ್‌ ಆಸ್ಪತ್ರೆ ಎದುರಿನ ರಾ.ಹೆ. 66ರಲ್ಲಿ ಖಾಸಗಿ ಬಸ್‌ಗೆ  ಹಿಂದಿನಿಂದ ಢಿಕ್ಕಿಯಾದ ಬೈಕ್‌ ಪಲ್ಟಿಯಾಗಿ ಸವಾರ ಪ್ರಸನ್ನ ಹಾಗೂ ಸಹ ಸವಾರೆ ಸುಮಿತ್ರಾ ಗಾಯಗೊಂಡ ಘಟನೆ ಮೇ 7ರ ಬೆಳಗ್ಗೆ 7.55ರ ಸುಮಾರಿಗೆ ಸಂಭವಿಸಿದೆ. ಇಬ್ಬರನ್ನೂ ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಚಾಲಕ ಕೆ. ಲಕ್ಷ್ಮಣ  ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next