Advertisement

ರೈತರ ಮಕ್ಕಳಿಗೆ ಪರಿಹಾರ ನೀಡುವ ಕಾನೂನೇ ಇಲ್ಲ!

12:04 AM Nov 30, 2019 | mahesh |

ಹೊಸದಿಲ್ಲಿ: ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಮಕ್ಕಳು ಮತ್ತು ಕುಟುಂಬಕ್ಕೆ ಪರಿಹಾರ ನೀಡುವಂತಹ ಯಾವುದೇ ಕಾನೂನು ಕೇಂದ್ರ ಸರಕಾರದಲ್ಲಿಲ್ಲ ಎಂಬ ಮಹತ್ವದ ಸಂಗತಿಯೊಂದು ಶುಕ್ರವಾರ ಬಹಿರಂಗವಾಗಿದೆ. ರಾಜ್ಯಸಭೆಯ ಪೂರಕ ಅವಧಿಯ ಪ್ರಶ್ನೋತ್ತರದ ವೇಳೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಹಾಯಕ ಸಚಿವ ಪುರುಷೋತ್ತಮ ರೂಪಾಲ ಇಂತಹ ಉತ್ತರ ನೀಡಿದ್ದಾರೆ. ಆದರೆ ರೈತರ ಪರಿಸ್ಥಿತಿ ಉತ್ತಮ ಪಡಿಸಲು ಹಲವಾರು ಕ್ರಮ ತೆಗೆದುಕೊಳ್ಳಲಾಗಿದೆ. 3 ಲಕ್ಷ ರೂ.ವರೆಗಿನ ಕಿರುಸಾಲಕ್ಕೆ ಬಡ್ಡಿ ಕಡಿತಗೊಳಿಸುವುದು ಇದರಲ್ಲಿ ಸೇರಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next