Advertisement

ವರುಣಾದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ: ವಿ. ಶ್ರೀನಿವಾಸಪ್ರಸಾದ್‌

10:30 PM Apr 23, 2023 | Team Udayavani |

ಮೈಸೂರು: ವಿ.ಸೋಮಣ್ಣ ಅವರ ಹಿಂದೆ ಕಾರ್ಯಕರ್ತರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ನನಗೆ 80 ಸಾವಿರ ಮತಗಳು ಬಂದಿವೆ. ವರುಣಾದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಸೋಲು ಗೆಲುವನ್ನು ಮತದಾರರು ನಿರ್ಧಾರ ಮಾಡುತ್ತಾರೆಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾರರು ಅಭ್ಯರ್ಥಿಗಳನ್ನು ಪ್ರಶ್ನಿಸುವುದು ಸಹಜ. ವಿ.ಸೋಮಣ್ಣಗೆ ಮುತ್ತಿಗೆ ಮಾಧ್ಯಮಗಳ ಸೃಷ್ಟಿ. ಸೋಮಣ್ಣ ಮೊದಲ ಬಾರಿ ಸ್ಪರ್ಧೆ ಮಾಡುತ್ತಿರುವುದರಿಂದ ಕುಪ್ಯ ಗ್ರಾಮಸ್ಥರು ಪ್ರಶ್ನೆ ಕೇಳಿದ್ದಾರೆ. ಜನರು ನರೇಂದ್ರ ಮೋದಿ ಅವರನ್ನೂ ಪ್ರಶ್ನೆ ಮಾಡುತ್ತಾರೆ ಎಂದು ಹೇಳಿದರು.
ಸಿದ್ದು ಬಾದಾಮಿಗೆ ಏಕೆ ಹೋದ್ರು?: ವರುಣದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಬ್ಬರದ ಭಾಷಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಗುಡುಗಿದರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್‌ ಗಾಂಧಿ ನಿಲ್ಲಿಸಿಕೊಂಡು ಗುಡುಗಿದರು. ಮೋದಿ ಮುಳುಗಿ ಹೋದರು ಅನ್ನೋ ಹಾಗೆ ಗುಡುಗಿದರು. ಆದರೆ ಕರ್ನಾಟಕದಲ್ಲಿ ಕೇವಲ 1 ಸೀಟು ಗೆದ್ದರು. ಹೀಗೆ ಗುಡುಗಿ, ಗುಡುಗಿ 36 ಸಾವಿರ ವೋಟಿನಲ್ಲಿ ಸೋತರು. ಬಾದಾಮಿ ಗೆ ಹೋದರು. ಸೋಮಣ್ಣ ಹೊರಗಿನವರು ಎನ್ನುವ ಸಿದ್ದರಾಮಯ್ಯ, ಬಾದಾಮಿಗೆ ಯಾಕೆ ಹೋದರು ಎಂದು ವಾಗ್ಧಾಳಿ ನಡೆ ಸಿ ದೆ ರು.

Advertisement

Udayavani is now on Telegram. Click here to join our channel and stay updated with the latest news.

Next