Advertisement

4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ

01:33 AM Sep 24, 2024 | Team Udayavani |

ನಾಗ್ಪುರ: ಕೇಂದ್ರದಲ್ಲಿ ಎನ್‌ಡಿಎ ಸರಕಾರ 4ನೇ ಅವಧಿಗೂ ಅಧಿಕಾರ ಹಿಡಿಯುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದರೆ ನನ್ನ ಸಹೋದ್ಯೋಗಿ ಮಿತ್ರ ರಾಮದಾಸ್‌ ಅಠಾವಳೆ ಮಂತ್ರಿಯಾಗುವುದು ಮಾತ್ರ ಗ್ಯಾರಂಟಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಅಠಾವಳೆಯವರ ಕಾಲೆಳೆದಿದ್ದಾರೆ.

Advertisement

ಮಹಾ ರಾಷ್ಟ್ರದ ನಾಗ್ಪುರದ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿ, ಆರ್‌ಪಿಐ ನಾಯಕ ಅಠಾವಳೆ 3 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವರ ಸಚಿವಗಿರಿ ಸರಣಿ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಬಳಿಕ ತಾವು ಜೋಕ್‌ ಮಾಡಿದ್ದಾಗಿಯೂ ಗಡ್ಕರಿ ಸ್ಪಷ್ಟಪಡಿಸಿದರು. ಅಠಾವಳೆ ಪಕ್ಷವು ಬಿಜೆಪಿ, ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್‌ ಪವಾರ್‌ ಅವರ ಎನ್ಸಿಪಿಯನ್ನು ಒಳಗೊಂಡ ಮಹಾಯುತಿ ಮೈತ್ರಿಯ ಭಾಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next