Advertisement

Pune ವಿಮಾನ ನಿಲ್ದಾಣ ಇನ್ನು “ಸಂತ ತುಕಾರಾಮ್‌ ಏರ್‌ಪೋರ್ಟ್‌’

01:26 AM Sep 24, 2024 | Team Udayavani |

ಮುಂಬಯಿ: ಪುಣೆ ವಿಮಾನ ನಿಲ್ದಾಣದ ಹೆಸರನ್ನು “ಜಗದ್ಗುರು ಸಂತ ತುಕಾ ರಾಮ್‌ ಮಹಾರಾಜ್‌ ಪುಣೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ’ವೆಂದು ಬದಲಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರಕಾರ ಸೋಮವಾರ ಅನುಮೋದನೆ ನೀಡಿದೆ. ಪುಣೆ ಮೂಲದ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್‌ ಮೊಹೋಲ್‌ ಪ್ರಸ್ತಾಪಿಸಿದ ವಿಮಾನ ನಿಲ್ದಾಣ ಮರು ನಾಮಕರಣ ಪ್ರಸ್ತಾವ‌ಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಈ ಕುರಿತು ಪ್ರಸ್ತಾವನೆಯನ್ನು ಕೇಂದ್ರಕ್ಕೂ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪುಣೆಯಲ್ಲಿ ಜನಿಸಿದ್ದ ಸಂತ ತುಕಾರಾಮ್‌ ಭಕ್ತಿ ಚಳುವಳಿ ಕಾಲಘಟ್ಟದ ಪ್ರಮುಖ ಸಂತ ಮತ್ತು ಅಧ್ಯಾತ್ಮಿಕ ಕವಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next